ಕರೋನಾ ಕಿರಿಕಿರಿ ನಡುವೆ ಡೆಂಗ್ಯೂ ಭಯ: ಸ್ವಚ್ಛತಾ ಕಾರ್ಯ

396

ಮಂಡ್ಯ: ಕರೋನಾ ಕಿರಿಕಿರಿ ನಡುವೆ ಡೆಂಗ್ಯೂ, ಮಲೇರಿಯಾ ಬರುವ ಭಯದಲ್ಲಿ ಜನರಿದ್ದಾರೆ. ಇದನ್ನ ಮನಗಂಡ ಮಂಡ್ಯ ಜಿಲ್ಲೆ ಬಸರಾಳು ಹೋಬಳಿ ಮುತ್ತೆಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾಟರ್ ಮ್ಯಾನ್ ಒಬ್ಬರು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಮುತ್ತೆಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ನಂದಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಬಿಡುವ ವಾಟರ್ ಮ್ಯಾನ್ ಮರಿಯಯ್ಯ, ಇಲ್ಲಿನ ಗಟಾರು ಸ್ವಚ್ಛತೆಗೆ ಮುಂದಾಗಿದ್ದಾರೆ. ಹೀಗಾಗಿ ಉಳಿದ ಕೆಲ ಜನರು ಇದಕ್ಕೆ ಸಾಥ್ ನೀಡಿದ್ದು, ಅವರವರ ಮನೆಯ ಮುಂದಿನ ಗಟಾರು ಸ್ವಚ್ಛತೆಯ ಕೆಲಸವನ್ನ ಮಾಡ್ತಿದ್ದಾರೆ.

ಮುತ್ತೆಗೆರೆ ಗ್ರಾಮ ಪಂಚಾಯ್ತಿ ಇಲಾಖೆಯ ಪಿಡಿಒ ಆಗಲಿ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು  ಇದರ ಬಗ್ಗೆ ಹೆಚ್ಚಿನ ಜಾಗೃತಿ ತೋರುತ್ತಿಲ್ಲ. ಇದ್ರಿಂದಾಗಿ ಊರಿನಲ್ಲಿ ಹಲವಾರು ರೋಗರುಜಿನಗಳು ಬರ್ತಿವೆ. ಈ ಕಾರಣಕ್ಕೆ ಸ್ವಯಂ ಪ್ರೇರಿತರಾಗಿ ಸ್ವಚ್ಛತೆ ಕಾರ್ಯ ನಡೆಸಿದ್ದಾರೆ. ಸ್ವಚ್ಛತೆ ಬಗ್ಗೆ ಗಮನ ಹರಿಸದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!