ಕರೋನಾ ತೊಗಲು ಮಂಡ್ಯದಲ್ಲಿ ವಿಶೇಷ ಪೂಜೆ

317

ಮಂಡ್ಯ: ಜಿಲ್ಲೆಯ ಬಸರಾಳು ಪಟ್ಟಣದ ನಂದಹಳ್ಳಿ ಗ್ರಾಮದೇವತೆ ಶ್ರೀ ಮಾರಮ್ಮನವರ ದೇವಸ್ಥಾನದಲ್ಲಿ ಕರೋನಾ ಮಹಾಮಾರಿಯ ಅಟ್ಟಹಾಸ ನಿಲ್ಲಲು ವಿಶೇಷ ಪೂಜೆ ಮಾಡಲಾಯ್ತು.

ಇಡೀ ವಿಶ್ವದಾದ್ಯಂತ ಕರೋನಾ ಅಟ್ಟಹಾಸವು ಎಲ್ಲೆ ಮೀರಿದೆ. ಕರೋನಾ ವೈರಾಣುಗಳನ್ನ ಸಂಹರಿಸಿ ತಾಯಿ ಮಾರಮ್ಮ ದೇವಿಯು ಆರೋಗ್ಯ, ಸಮೃದ್ಧಿಯನ್ನ ಕರುಣಿಸುವಂತೆ ಗ್ರಾಮಸ್ಥರೆಲ್ಲ ಸೇರಿ ವಿಶೇಷ  ಪ್ರಾರ್ಥನೆ ಸಲ್ಲಿಸಿದ್ರು. ಈ ವೇಳೆ ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳುವುದು ಮರೆತು ಹೋಗಿದ್ದು ಕಂಡು ಬಂತು.

ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದ ಹೆಣ್ಣುಮಕ್ಕಳಾದ ಜಯಮ್ಮ, ಚಿಕ್ಕತಾಯಮ್ಮ ಮಂಗಳಮ್ಮ, ಮುಖಂಡರಾದ ಮರಿಗೌಡ, ದೊಳೇಗೌಡ, ಶಿವಲಿಂಗಯ್ಯ, ಗ್ರಾಮದ ಉಸ್ತುವಾರಿ ಕೆ. ರಾಮೇಗೌಡ, ಎಸ್ ಸಿದ್ಧರಾಜು, ಚೇರ್ಮನ್ ನಾಥೇಗೌಡ, ಸಿದ್ದಲಿಂಗಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!