ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದ ತುಂಬಾ ಮಳೆಯ ಆರ್ಭಟ ಜೋರಾಗಿದೆ. ಇದರ ಕಾರ್ಯಾಚರಣೆಯಲ್ಲಿರುವ ಸಿಎಂಗೆ ದೆಹಲಿಯಿಂದ ಕರೆ ಬಂದಿದ್ದು, ಇಂದು ಮಧ್ಯಾಹ್ನ ಹೊರಟಿದ್ದಾರೆ. ಬಿಜೆಪಿ ಹೈಕಮಾಂಡ್ ಏಕಾಏಕಿ ಕರೆ ಸಾಕಷ್ಟು ಕುತೂಹಲ ಮೂಡಿಸಿದೆ.
ಸಚಿವ ಸಂಪುಟ ವಿಸ್ತರಣೆಗೆ ಇದುವರೆಗೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಇಂದು ಏನಾದರೂ ಅದಕ್ಕೆ ಅವಕಾಶ ಸಿಗಬಹುದಾ ಅನ್ನೋ ನಿರೀಕ್ಷೆ ಇದೆ. ಹೀಗಾಗಿ ಸಚಿವರಾಗಬೇಕು ಅನ್ನೋರು ಸಿಎಂ ದೆಹಲಿ ಪ್ರವಾಸದ ಕುರಿತು ಟೆನ್ಷನ್ ಆಗಿದ್ದಾರೆ.