ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದ 18 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಕೋವಿಡ್ ನಿರ್ವಹಣಾ ಸಭೆ ನಡೆಸಿದರು. ವರ್ಚುವಲ್ ಸಭೆಯ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಸೋಂಕಿತರ ಅಂಕಿಸಂಖ್ಯೆ, ಮೊದಲ ಡೋಸ್ ಲಸಿಕೆ ಪಡೆದವರು ಹಾಗೂ 2ನೇ ಡೋಸ್ ಪ್ರಗತಿ ಸೇರಿ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಿದರು.
ಇನ್ನು ಒಪಿಡಿಗಳ ಮಾಹಿತಿ ಪಡೆದಿದ್ದಾರೆ. ಎಲ್ಲ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಮೂಲ ಸೌಕರ್ಯದ ಬಗ್ಗೆ ಈಗಿನಿಂದಲೇ ಗಮನಹರಿಸಲು ಹೇಳಲಾಗಿದೆ. ಅಲ್ದೇ, ಮೊದಲ ಡೋಸ್ ಶೇ.100ರಷ್ಟು ಪೂರ್ತಿಯಾಗುವುದರ ಜೊತೆಗೆ 2ನೇ ಡೋಸ್ ಲಸಿಕೆಗೆ ವೇಗ ನೀಡಬೇಕು ಅನ್ನೋ ಸೂಚನೆ ನೀಡಿದ್ದಾರೆ.