‘ಮಹಾ’ಗೆ ನೀರು ಬಿಡುವ ವಿಚಾರ: ಸಿಎಂ ವಿರುದ್ಧ ‘ಕತ್ತಿ’ ವರಸೆ

398

ಚಿಕ್ಕೋಡಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಸಿಎಂ ಬಿ.ಎಸ್ ಯಡಿಯೂರಪ್ಪ, ಆಲಮಟ್ಟಿ ಅಣೆಕಟ್ಟು ನೀರು ಬಿಡುವ ಬಗ್ಗೆ ಮಾತ್ನಾಡಿದ್ದಾರೆ. ಇದಕ್ಕೆ ಶಾಸಕ ಉಮೇಶ ಕತ್ತಿ, ಪ್ರಧಾನಿ ಮೋದಿ ಹಾಗೂ ಸಿಎಂ ವಿರುದ್ಧ ಕಿಡಿ ಕಾರಿದ್ದಾರೆ.

ಮಹದಾಯಿ ಯೋಜನೆ ಆಲಾಟ್ ಮೆಂಟ್ ಆಗಿ 7 ವರ್ಷಗಳಾಗಿವೆ. ಆದರೂ ಅದರ ಕೆಲಸ ಮಾಡಿಲ್ಲ. ಈಗ ಮಹಾರಾಷ್ಟ್ರಕ್ಕೆ ನೀರು ಕೊಡ್ತೀನಿ ಅನ್ನೋದನ್ನ ನಾನು ವಿರೋಧಿಸ್ತೀನಿ ಎಂದು ಕತ್ತಿ ಹೇಳಿದ್ದಾರೆ. ವೋಟ್ ಪಡೆಯಲು ಏನೇನೋ ಮಾತ್ನಾಡುವುದು ಸರಿಯಲ್ಲ. ಎಲೆಕ್ಷನ್ ಟೈಂನಲ್ಲಿ ಮಹಾರಾಷ್ಟ್ರಕ್ಕೆ ನೀರು ಬಿಡುತ್ತೇವೆ ಅನ್ನೋದು ಹಗುರವಾದ ಮಾತು. ನಮ್ಗೆ ನೀರು ಬಿಡಿ ಅಂದ್ರೆ ಅವರು ಬಿಟ್ಟಿಲ್ಲ ಅಂತಾ ಆಕ್ರೋಶ ಹೊರ ಹಾಕಿದ್ರು.

ನಮ್ಮ ಭಾಗಕ್ಕೆ ಸರಿಯಾಗಿ ನೀರು ಕೊಡದಿದ್ರೆ ಪ್ರತ್ಯೇಕ ರಾಜ್ಯವನ್ನ ನೀಡಲಿ. ಈ ಭಾಗಕ್ಕೆ ಅನ್ಯಾಯವಾದ್ರೆ, ನಾನು ಸಾಯುವ ತನಕ ಹೋರಾಡುತ್ತೇನೆ ಅಂತಾ ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!