ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನನ್ನ ಹಾಗೂ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಂತ್ಯವಾಗುತ್ತದೆ ಎಂದು ಶಾಪ ಹಾಕಿರುವ ದೇವೇಗೌಡರ ಮಾತನ್ನು ಆಶೀರ್ವಾದ ಎಂದು ಸ್ವೀಕರಿಸಿದ್ದೇನೆ. ದಶಕಗಳ ಕಾಲ ಜಾತ್ಯಾತೀತ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಕೋಮುವಾದಿ ಕಿರೀಟ ಧರಿಸಿಕೊಳ್ಳಬೇಕಾಗಿ ಬಂದಿದ್ದಕ್ಕೆ ಹತಾಶೆಯಿಂದ ಹೇಳಿಕೆ ನೀಡರಬಹುದು ಎಂದುಕೊಂಡಿದ್ದೇನೆ ಅಂತಾ ಸಿಎಂ ಸಿದ್ದರಾಮಯ್ಯ ಟಾಂಟ್ ಕೊಟ್ಟಿದ್ದಾರೆ.
ಯಾವುದೇ ರಾಜಕೀಯ ಪಕ್ಷ ಇನ್ನೊಂದು ರಾಜಕೀಯ ಪಕ್ಷದ ನಾಶ ಬಯಸಬಾರದು. ಸೊಕ್ಕಿನ ಮಾತುಗಳನ್ನಾಡುವ ಬಿಜೆಪಿಯವರ ಗಾಳಿ ದೇವೇಗೌಡರಿಗೂ ಸೋಕಿರಬಹುದು. ಇದು ಸಂಗ ದೋಷದ ಫಲ. ಜೆಡಿಎಸ್ ಹಾಗೂ ಅವರ ಹೊಸ ಮಿತ್ರ ಪಕ್ಷ ಬಿಜೆಪಿ ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಇರಬೇಕೆಂದು ಬಯಸುತ್ತೇನೆ ಎನ್ನುವ ಮೂಲಕ ವಾಗ್ದಾಳಿ ನಡೆಸಿದರು.