ಬ್ರೇಕಿಂಗ್ ನ್ಯೂಸ್: ‘ಕಮಲ’ ಮುಡಿಯುತ್ತಿರುವ ಖುಷ್ಬೂ ‘ಕೈ’ ಬಿಟ್ಟ ಕಾಂಗ್ರೆಸ್

326

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ ಅವರು ಬಿಜೆಪಿ ಸೇರುತ್ತಾರೆ ಅನ್ನೋ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷ ಅವರನ್ನ ಉಚ್ಛಾಟನೆ ಮಾಡಿದೆ. ಎಐಸಿಸಿ ವಕ್ತಾರೆ ಸ್ಥಾನದಿಂದ ಖುಷ್ಬೂರನ್ನ ತೆಗೆದು ಹಾಕಲಾಗಿದೆ.

2021ರ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬಿಜೆಪಿ ಸೇರುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಇಂದು ಬಿಜೆಪಿ ಹೈಕಾಂಡ್ ಭೇಟಿಯಾಗಿ ಅಧಿಕೃತವಾಗಿ ಕೇಸರಿ ಶಾಲು ಹಾಕಿಕೊಳ್ಳಲಿದ್ದಾರೆ ಅನ್ನೋದು ತಿಳಿದು ಬಂದಿದೆ.

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಎಲ್. ಮುರುಗನ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗ್ತಿರುವ ಬೆನ್ನಲ್ಲೇ ತಮಿಳುನಾಡು ಕಾಂಗ್ರೆಸ್ ಉಚ್ಛಾಟಿಸಿದೆ.




Leave a Reply

Your email address will not be published. Required fields are marked *

error: Content is protected !!