ಪ್ರಜಾಸ್ತ್ರ ಸುದ್ದಿ
ಬಳ್ಳಾರಿ: ಸಂಡೂರು ಕಾಂಗ್ರೆಸ್ ಶಾಸಕ ತುಕಾರಂ ಅವರಿಗೆ ಅಗೌರವ ತೋರುತ್ತಿರುವ ತಹಶೀಲ್ದಾರ್ ರಶ್ಮಿಯವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಈ ಬಗ್ಗೆ ಸದನದಲ್ಲಿ ದೊಡ್ಡ ಮಟ್ಟದಲ್ಲಿ ಗಲಾಟೆಯಾಗಿದೆ. ವರ್ಗಾವಣೆ ಬದಲು ಸಸ್ಪೆಂಡ್ ಮಾಡಿ ತನಿಖೆ ನಡೆಸಬೇಕು ಎಂದರು.
ವರ್ಗಾವಣೆ ಮಾಡಲಾಗಿದೆಯಾದರೂ ಸ್ಥಳ ನಿಯೋಜನೆ ಮಾಡಿಲ್ಲ. ಹೀಗಾಗಿ ಬೆಂಗಳೂರಿನಲ್ಲಿರುವ ಕಂದಾಯ ಇಲಾಖೆಯ ಕಚೇರಿಗೆ ಬಂದು ರಿಪೋರ್ಟ್ ಮಾಡಿಕೊಳ್ಳಲು ಹೇಳಲಾಗಿದೆ. ಇವರ ಜಾಗಕ್ಕೆ ಪ್ರಭಾರಿಯಾಗಿ ವಿಶ್ವಜೀತ್ ಮೆಹ್ತಾ ಅವರನ್ನು ನೇಮಕ ಮಾಡಲಾಗಿದೆ.
ಕಚೇರಿಗೆ ಹೋದರೆ ತಹಶೀಲ್ದಾರ್ ರಶ್ಮಿಗೆ ನಮಗೆ ಗೌರವ ಕೊಡುವುದಿಲ್ಲವೆಂದು ಹಕ್ಕುಚ್ಯುತಿ ಮಂಡನೆ ಮಾಡಿದ್ದರು. ಇದೀಗ ಅವರನ್ನು ವರ್ಗಾವಣೆ ಮಾಡಲಾಗಿದೆ.