ಬೆಂಗಳೂರು: ಸಿಎಂ ಯಡಿಯೂರಪ್ಪನವರ ವಿರುದ್ಧ ಕಾಂಗ್ರೆಸ್ ಟ್ವೀಟರ್ ನಲ್ಲಿ ಕುಟುಕಿದೆ. ಹಿಂಬಾಗಿಲ ಸಿಎಂ ಅವರೆ ಎಲ್ಲಿ ನಿಮ್ಮ ಸಚಿವ ಸಂಪುಟ. ಆರ್ ಎಸ್ಎಸ್ ಮತ್ತು ಬಿಜೆಪಿಯ ಅಧಿಕಾರ ಕಿತ್ತಾಟಕ್ಕೆ ರಾಜ್ಯದ ಜನತೆಗೆ ಏಕೆ ತೊಂದರೆಕೊಡುತ್ತಿರುವಿರಿ? ಆಡಳಿತ ಯಂತ್ರ ಸ್ಥಗಿತಗೊಳಿಸಿರುವಿರೇಕೆ? ಮಂತ್ರಿಗಳಿಗಾಗಿ, ಅಭಿವೃದ್ಧಿ ಕೆಲಸಗಳಿಗಾಗಿ ಜನತೆ ಇನ್ನೆಷ್ಟು ದಿನ ಕಾಯಬೇಕು? ಎಂದು ಕೇಳಿವ ಮೂಲಕ ಬಿಎಸ್ವೈಗೆ ಪರೋಕ್ಷ ಟಾಂಗ್ ಕೊಟ್ಟಿದೆ.
ಈ ಹಿಂದೆ ಸಮಿಶ್ರ ಸರ್ಕಾರ ಬಹುಮತವಿಲ್ಲದೆ ಮುಂದುವರೆದಿದೆ. ಅಧಿಕಾರದಲ್ಲಿದೆ ಅಂತಾ ಕೆಂಡಾಮಂಡಲವಾಗಿದ್ರು. ಬಹುಮತ ಸಾಬೀತಿಗೆ ಎರಡು ದಿನ ತಡವಾದಾಗ ಬಿಎಸ್ ಯಡಿಯೂರಪ್ಪನವರು ಗರಂ ಆಗಿದ್ರು. ಆದ್ರೆ, ಇದೀಗ ಸಿಎಂ ಆಗಿ ವಾರದ ಮೇಲಾಗಿದೆ. ಇನ್ನು ಸಚಿವ ಸಂಪುಟ ರಚನೆ ಮಾಡಿಲ್ಲವಲ್ಲ ಅಂತಾ ಪ್ರಶ್ನೆ ಮಾಡಲಾಗಿದೆ.
ಜುಲೈ 26ರಂದು ಸಿಎಂ ಆಗಿ ಬಿ.ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದ್ರೆ, ಇದುವರೆಗೂ ಮಂತ್ರಿ ಮಂಡಲ ಮಾತ್ರ ರಚನೆಯಾಗಿಲ್ಲ. ಈ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡ್ತಿದ್ದಾರೆ.