ಬೆಂಗಳೂರು: ಜಿಎಸ್ ಟಿ ನೀತಿ ಮತ್ತು ನೋಟ್ ಬ್ಯಾನ್ ಪರಿಣಾಮ ದೇಶದ ಸಣ್ಣ, ಮಧ್ಯಮ ಮತ್ತು ಬೃಹತ್ ಉದ್ಯಮಗಳು ನೆಲಕಚ್ಚುತ್ತಿವೆ. ಇದ್ರಿಂದಾಗಿ ಒಂದೊಂದಾಗಿ ಕಂಪನಿಗಳು ಬಾಗಿಲು ಮುಚ್ಚುತ್ತಿವೆ. ಕೆಲ ಪ್ರಸಿದ್ಧ ಕಂಪನಿಗಳು ಸಾವಿರಾರು ನೌಕರರನ್ನ ಕಡಿತಗೊಳಿಸ್ತಿದ್ದಾರೆ. ಕೆಲ ದಿನಗಳ ಹಿಂದೆ ಆಟೋಮೊಬೈಲ್ ಕ್ಷೇತ್ರದಲ್ಲಿ ಈ ನಿರ್ಧಾರವಾಗಿತ್ತು. ಇದೀಗ ಪ್ರತಿಷ್ಠಿತ ಪಾರ್ಲೆಜಿ ಬಿಸ್ಕಿತ್ ಕಂಪನಿ 10 ಸಾವಿರ ಸಿಬ್ಬಂದಿಯನ್ನ ಕೆಲಸದಿಂದ ತೆಗೆದು ಹಾಕುವ ನಿರ್ಧಾರ ಮಾಡಿದೆ.
ಹೀಗಾಗಿ ರಾಜ್ಯ ಕಾಂಗ್ರೆಸ್ ಟ್ವೀಟರ್ ಮೂಲಕ ಕೇಂದ್ರ ಸರ್ಕಾರವನ್ನ, ಪ್ರಧಾನಿ ಮೋದಿ ಅವರನ್ನ ಕಾಲೆಳೆದಿದೆ. ಮೋದಿ ನೇತೃತ್ವದ ಮೂರ್ಕ ಆರ್ಥಿಕ ನೀತಿಗಳೆ ಇದಕ್ಕೆ ಕಾರಣ.ಮೋದಿ ಎಲ್ಲಿದ್ದೀರಪ್ಪ ಎಂದು ಟ್ವೀಟ್ ಮಾಡುವ ಮೂಲಕ ತೀಕ್ಷಣವಾಗಿ ವಾಗ್ದಾಳಿ ನಡೆಸಿದೆ.