ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕೇಂದ್ರ ಸರ್ಕಾರದ ನಡೆ ವಿರುದ್ಧ ಆಗಾಗ ವಾಗ್ದಾಳಿ ನಡೆಸುತ್ತಲೇ ಇರುವ ನಟ ಕಿಶೋರ್, ಇದೀಗ ಮಣಿಪುರ ಪೈಶಾಚಿಕ ಕೃತ್ಯದ ಕುರಿತು ಪ್ರಧಾನಿ ಮೋದಿ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ್ದಾರೆ.
ಕೇವಲ ಮತ, ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ನಿಮ್ಮ ರಾಜಕೀಯ ಇಲ್ಲಿಗೆ ತಂದು ನಿಲ್ಲಿಸಿದೆ. ಈಗಲಾದರೂ ನೀವು ಬಾಯಿ ತೆರೆದು ಆ ಮಹಿಳೆಯರಲ್ಲಿ ಕ್ಷಮೆಯಾಚಿಸಿ. ನೀವು ಕ್ಷಮೆಯಾಚಿಸದೆ ಹೋದರೆ ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ ಅಂತಾ ಕಿಡಿ ಕರಿದಿದ್ದಾರೆ.
ಮಹಿಳಾ ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಪರ ಸದ್ದಿಲ್ಲದೆ ಬೆಂಬಲಿಸಿದ್ಯಾರು? ಹತ್ರಾಸ್ ದಲಿತ ಹೆಣ್ಮಕ್ಕಳ ಅತ್ಯಾಚಾರ, ಹತ್ಯೆ ಮುಚ್ಚಿ ಹಾಕಿದವರು ನೀವೇ ಅಲ್ಲವೇ? ಬಲ್ಕಿಸ್ ಬಾನು ಪ್ರಕರಣ ಆರೋಪಿಗಳನ್ನು ಬಿಡುಗಡೆ ಮಾಡಿ ಸಂಭ್ರಮಿಸಿದ್ದು ನೀವೇ ಅಲ್ಲವೇ ಅಂತಾ ತೀವ್ರವಾಗಿ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.