ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಜಾಗದಲ್ಲಿನ ಕಾಂಗ್ರೆಸ್ ಪಕ್ಷದ ಫ್ಲೆಕ್ಸ್, ಬ್ಯಾನರ್ ಗಳನ್ನು ತೆಗೆದು ಹಾಕುತ್ತಿದೆ. ಇದರ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಿಬಿಎಂಪಿ ಹೆಸರನ್ನು ಬಿಜೆಪಿ ಕಚೇರಿ ಎಂದು ಬದಲಿಸಿ ಎಂದಿದ್ದಾರೆ.
ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಫ್ಲೆಕ್ಸ್ ಹಾಕಬಹುದು, ಸಚಿವರಾದ ವಿ.ಸೋಮಣ್ಣ, ಅಶ್ವಥನಾರಾಯಣ್ ಹುಟ್ಟು ಹಬ್ಬಕ್ಕೆ ಬ್ಯಾನರ್, ಫ್ಲೆಕ್ಸ್ ಕಟ್ಟಬಹುದು. ಆದರೆ, ಕಾಂಗ್ರೆಸ್ ನವರು ಹಾಕಬಾರದೆ ಎಂದು ಬಿಬಿಎಫಿ ಆಯುಕ್ತ ಗೌರವ್ ಗುಪ್ತಾ ವಿರುದ್ಧ ಸಹ ಕಿಡಿ ಕಾರಿದ್ದಾರೆ.