ಹಿರಿಯ ನಟಿ ಲೀಲಾವತಿ ಅವರ ಪುತ್ರ ನಟ ವಿನೋದರಾಜ ಅವರು ಸಿನಿರಂಗದಿಂದ ದೂರವಾಗಿ ಬಹಳ ವರ್ಷಗಳಾಗಿವೆ. ಆದ್ರೆ, ಅವರ ಸಮಾಜಮುಖಿ ಕೆಲಸಗಳು ನಿಂತಿಲ್ಲ. ಒಂದಲ್ಲ ಒಂದು ಕಾರ್ಯಗಳನ್ನ ಮಾಡುತ್ತಲೇ ಇರ್ತಾರೆ. ಇದೀಗ ಅವರು ಕರೋನಾ ಜಾಗೃತಿ ಕೆಲಸಕ್ಕೆ ಕೈ ಹಾಕಿದ್ದಾರೆ.
ತಾಯಿಯೊಂದಿಗೆ ನೆಲಮಂಗಲದ ಸಮೀಪದ ಸೋಲದೇವನಹಳ್ಳಿಯಲ್ಲಿ ನಲೆ ನಿಂತಿರುವ ನಟ ವಿನೋದರಾಜ ಅವರು, ಆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯವನ್ನ ಕೈಗೊಂಡಿದ್ದಾರೆ. ಕರೋನಾ ವೈರಸ್ ತಡೆಯಲು ನಮ್ಮ ಸುತ್ತಲಿನ ಪರಿಸರದ ನೈರ್ಮಲ್ಯ ತುಂಬಾ ಮುಖ್ಯವಾಗಿದ್ದು, ಆ ಕೆಲಸವನ್ನ ಅವರು ಮಾಡ್ತಿದ್ದಾರೆ.
ತಾಯಿಯೊಂದಿಗೆ ಹಳ್ಳಿ ಪರಿಸರದಲ್ಲಿ ನೆಮ್ಮದಿಯ ಜೀವನ ಮಾಡ್ತಿರುವ ನಟ ವಿನೋದರಾಜ, ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ತಮ್ಮ ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸ್ತಾ ಸ್ವಚ್ಛತಾ ಕೆಲಸ ಮಾಡ್ತಿದ್ದಾರೆ. ಇದರ ಜೊತೆಗೆ ಬಹು ವರ್ಷಗಳ ಬಳಿಕ ಮುಖವಾಡ ಅನ್ನೋ ಚಿತ್ರದಲ್ಲಿ ಸಣ್ಣಪಾತ್ರ ಮಾಡಲು ಅವರನ್ನ ಒಪ್ಪಿಸಲಾಗಿದೆ.