ಕರೋನಾ ಶಂಕಿತರ ಮಾಹಿತಿ: ಯುವಕನನ್ನ ಹೊಡೆದು ಕೊಂದ ಕ್ರೂರಿಗಳು

558

ಬಿಹಾರ: ಈ ದೇಶದಲ್ಲಿ ಇನ್ನು ಎಂಥಾ ಘಟನೆಗಳು ನಡೆಯುತ್ತವೆಯೋ. ಕರೋನಾ ಶಂಕಿತರ ಕುರಿತು ಮಾಹಿತಿ ನೀಡಿದಕ್ಕೆ ಯುವಕನೊಬ್ಬನನ್ನ ಹೊಡೆದು ಹತ್ಯೆ ಮಾಡಿದ ಘಟನೆ ರನ್ನಿಸೈದ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಯುವಕನನ್ನ ಬಬ್ಲು ಎಂದು ಗುರುತಿಸಲಾಗಿದೆ. ಈ ಸಂಬಂಧ 7 ಜನರನ್ನ ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಮಹಾರಾಷ್ಟ್ರದಿಂದ ಬಂದವರಿಗೆ ಕರೋನಾ ಸೋಂಕಿನ ಲಕ್ಷಣಗಳಿವೆ ಎಂದು ಬಬ್ಲು ಹೇಳಿದ್ದ. ಹೀಗಾಗಿ ಇಬ್ಬರನ್ನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಲಾಗಿತ್ತು.

ಪರೀಕ್ಷೆ ಮುಗಿಸಿಕೊಂಡು ಗ್ರಾಮಕ್ಕೆ ಬಂದವರು ಇನ್ನು ಕೆಲವರ ಸಹಾಯ ತೆಗೆದುಕೊಂಡು ಬಬ್ಲುನನ್ನ ಬಂಧಿಸಿದ್ದಾರೆ. ನಂತರ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಇದರ ಪರಿಣಾಮ ಆತ ಮೃತಪಟ್ಟಿದ್ದಾನೆ. ಈ ದೇಶದಲ್ಲಿ ಕೆಲವರ ಮನಸ್ಥಿತಿ ಎಷ್ಟೊಂದು ಕ್ರೂರವಾಗಿದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?




Leave a Reply

Your email address will not be published. Required fields are marked *

error: Content is protected !!