ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೂ ಇದೀಗ ಕರೋನಾ ಕಂಟಕ ಶುರುವಾಗಿದೆ. ಗೃಹ ಕಚೇರಿಯ ಮಹಿಳಾ ಸಿಬ್ಬಂದಿ ಪತಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಯಾರಿಗೂ ಕೃಷ್ಣಾದೊಳಗೆ ಪ್ರವೇಶವಿಲ್ಲ.
ಇನ್ನು ಸಿಎಂ ಬಿಎಸ್ವೈ ಅವರ ಎಲ್ಲ ಕಾರ್ಯಕ್ರಮಗಳು ವಿಧಾನಸೌಧಕ್ಕೆ ಶಿಫ್ಟ್ ಆಗಿವೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಹಿಳಾ ಪೊಲೀಸ್ ಪೇದೆ ಕೆಲಸ ನಿರ್ವಹಿಸ್ತಿದ್ರು. ಇವರ ಪತಿಗೆ ಸೋಂಕು ತಗುಲಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿಯನ್ನ ಸ್ಯಾನ್ ಟೈಸರ್ ಮಾಡಲಾಗ್ತಿದೆ. ಈ ಕಾರಣಕ್ಕೆ ಸಿಎಂ ಕಾರ್ಯಕ್ರಮಗಳನ್ನ ವಿಧಾನಸೌಧಕ್ಕೆ ವರ್ಗಾಹಿಸಲಾಗಿದೆ.