ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೋವಿಡ್ ಸೋಂಕು ಶುರುವಾದ 1 ಹಾಗೂ 2ನೇ ಅಲೆಯಿಂದ ಹಿಡಿದು ಈಗಿನವರೆಗೂ ಅನೇಕ ವೈದ್ಯರು ಅನೇಕ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಕೆಗಳನ್ನು, ಅನುಭವಗಳನ್ನು ತಿಳಿಸಿದ್ದು, ಕೆಲ ಸಲಹೆಗಳನ್ನು ಸಹ ನೀಡಿದ್ದಾರೆ. ಆದರೆ, ಇದೀಗ ಅದಕ್ಕೆ ರಾಜ್ಯ ಸರ್ಕಾರ ಬೀಗ ಹಾಕುವ ಕೆಲಸಕ್ಕೆ ಮುಂದಾಗಿದೆ.
ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಇನ್ಮುಂದೆ ಕೋವಿಡ್ ಬಗ್ಗೆ ಎಲ್ಲ ವೈದ್ಯರು ಮಾತನಾಡುವಂತಿಲ್ಲ. ಸರ್ಕಾರ ಅಧಿಕೃತವಾಗಿ ನೇಮಿಸಿದ ವೈದ್ಯರು ಹಾಗೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಮಾತನಾಡಬೇಕು. ಸರ್ಕಾರದ ಕಡಿತಕ್ಕೆ ಸಹಿ ಆಗಿದೆ. ಅದರ ಆದೇಶ ಇಂದು ಹೊರ ಬೀಳಬಹುದು ಎಂದು ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 14-15 ವೈದ್ಯರು ಹಾಗೂ ಆಯಾ ಜಿಲ್ಲೆಗಳಲ್ಲಿ ಸರ್ಕಾರ ನೇಮಿಸಿದವರು ಮಾತ್ರ ಮಾತನಾಡಬೇಕು. ಅವರು ನೀಡುವ ವರದಿ ಮಾತ್ರ ಅಧಿಕೃತವಾದದ್ದು ಎಂದು ಸಚಿವರು ಹೇಳಿದ್ದಾರೆ. ಇದಕ್ಕೆ ವಿಪಕ್ಷಗಳು ಹಾಗು ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ. ವೈದ್ಯರ ವಾಕ್ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತಿದೆ ಎಂದು ಕಿಡಿ ಕಾರಿದ್ದು, ಇದಕ್ಕೆ ಸರ್ಕಾರ ಹೇಗೆ ಉತ್ತರಿಸುತ್ತೆ ನೋಡಬೇಕು.