ಪತ್ರಕರ್ತರ ವಿಮೆಗೆ ಮಾಜಿ ಸಿಎಂ ಒತ್ತಾಯ.. ‘ಪ್ರಜಾಸ್ತ್ರ’ ಈ ಬಗ್ಗೆ ಮನವಿ ಮಾಡುತ್ತಲೇ ಇದೆ

317

ಬೆಂಗಳೂರು: ಕರೋನಾ ವಿರುದ್ಧದದ ಹೋರಾಟದಲ್ಲಿ ಪತ್ರಕರ್ತ ಪಾತ್ರ ಸಹ ದೊಡ್ಡದಿದೆ. ಅವರಿಗೆ ರಾಜ್ಯ ಸರ್ಕಾರದಿಂದ 25 ಲಕ್ಷ ರೂಪಾಯಿ ವಿಮಾ ಸೌಲಭ್ಯ ಘೋಷಿಸಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರೋನಾ ಜಾಗೃತಿ ಮೂಡಿಸ್ತಿರುವ ಮುದ್ರಣ ಹಾಗೂ ದೃಶ್ಯ ಮಾಧ್ಯಮದ ಪತ್ರಕರ್ತರಿಗೆ 25 ಲಕ್ಷ ರೂಪಾಯಿ ವಿಮಾ ಸೌಲಭ್ಯವನ್ನು ರಾಜ್ಯ ಸರ್ಕಾರ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

https://twitter.com/hd_kumaraswamy/status/1255005406692290560?s=20

ಈ ಬಗ್ಗೆ ‘ಪ್ರಜಾಸ್ತ್ರ’ ಸತತವಾಗಿ ಸುದ್ದಿ ಮಾಡುತ್ತಲೇ ಬರ್ತಿದೆ. ಪಶ್ಚಿಮ ಬಂಗಾಳ, ಹರಿಯಾಣ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗ್ಲೇ 10, 15 ಲಕ್ಷ ರೂಪಾಯಿ ವಿಮಾ ಸೌಲಭ್ಯ ಘೋಷಿಸಿದೆ. ಅದೇ ರೀತಿ ರಾಜ್ಯ ಸರ್ಕಾರವೂ ಘೋಷಣೆ ಮಾಡ್ಬೇಕು ಎಂದು ಹೇಳಿಕೊಂಡು ಬರುತ್ತಲೇ ಇದ್ದೇವೆ. ಇದಕ್ಕೆ ಮಾಜಿ ಸಿಎಂ ಧ್ವನಿಗೂಡಿಸಿದ್ದಾರೆ. ಇನ್ನಾದ್ರೂ ಸಿಎಂ ಪತ್ರಕರ್ತರಿಗೆ ವಿಮಾ ಸೌಲಭ್ಯ ಘೋಷಣೆ ಮಾಡ್ತಾರಾ ನೋಡ್ಬೇಕು.




Leave a Reply

Your email address will not be published. Required fields are marked *

error: Content is protected !!