ಕಲಬುರಗಿ: ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕ ಪ್ರಿಯಾಂಕ ಖರ್ಗೆ, ರಾಜ್ಯದಲ್ಲಿ ನಾಲ್ವರು ಕರೋನಾ ಸಚಿವರಿದ್ದಾರೆ. ಆದ್ರೂ ಸರಿಯಾಗಿ ಕೆಲಸವಾಗ್ತಿಲ್ಲವೆಂದು ಕಿಡಿ ಕಾರಿದ್ದಾರೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಲ್ಯಾಬ್ ತೆಗೆಯುವುದಾಗಿ ಹೇಳಿತ್ತು. ಆದ್ರೆ, ಇಲ್ಲಿಯವರೆಗೂ ಆ ಕೆಲಸವನ್ನ ಸರ್ಕಾರ ಮಾಡಿಲ್ಲ. ಕರೋನಾ ಗೆಲ್ಲಬೇಕು ಅಂದ್ರೆ ರಕ್ಷಕರಿಗೆ ರಕ್ಷಣೆ ನೀಡಬೇಕು. ಗುಣಮಟ್ಟದ ಪಿಪಿಇ ಕಿಟ್ ವಿತರಣೆ ಮಾಡಿಲ್ಲವೆಂದು ವಾಗ್ದಾಳಿ ನಡೆಸಿದ್ರು.
ಕಲಬುರಗಿ ಇಎಸ್ಐಗೆ ಇಲ್ಲಿಯವರೆಗೂ ಒಂದು ರೂಪಾಯಿ ಬಂದಿಲ್ಲ. ಸಂಸದ ಉಮೇಶ ಜಾಧವ ಈ ಬಗ್ಗೆ ಕೇಳದೆ ಸುಮ್ಮನೆ ಉಳಿದಿದ್ದಾರೆ. ಆದ್ರಿಂದ ಜಾಧವ ರಾಜೀನಾಮೆ ನೀಡಿ ಆಸ್ಪತ್ರೆ ತೆರೆಯಲಿ ಎಂದು ಸಂಸದ ಜಾಧವ ವಿರುದ್ಧ ಸಹ ಆಕ್ರೋಶ ವ್ಯಕ್ತಪಡಿಸಿದ್ರು.