ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದ ಘಟನೆ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಹಾಗೂ ಆರ್ ಎಸ್ಎಸ್ ಮಂಡ್ಯದಲ್ಲಿ ಕೋಮು ರಾಜಕಾರಣ ಪ್ರಯೋಗ ಶಾಲೆ ಪ್ರಾರಂಭಿಸಿದೆ ಎಂದಿದ್ದಾರೆ.
ಸಮಾಜ ಶಾಂತಿಯುತವಾಗಿರುವುದು ಬಿಜೆಪಿಗೆ ಬೇಕಿಲ್ಲ. ಅವರಿಗೆ ತಿಂದ ಅನ್ನ ಜೀರ್ಣವಾಗಲ್ಲ. ಮಂಡ್ಯದಲ್ಲಿ ಬೆಂಕಿ ಹೊತ್ತಿಸಿ ಅದರಲ್ಲಿ ರಾಜಕೀಯ ಚಳಿ ಕಾಯಿಸಿಕೊಳ್ಳುವ ಕೀಳು ರಾಜಕಾರಣ. ಆರ್.ಅಶೋಕ್, ಬಿ.ವೈ ವಿಜಯೇಂದ್ರ ಅವರು ತಮ್ಮ ಸ್ಥಾನದ ಗೌರವ ಮಣ್ಣುಪಾಲು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ರಾಷ್ಟ್ರದ ಧ್ವಜದ ಬದಲು ಭಗವಾ ಧ್ವಜ ಹಾರಿಸಿದ್ದು ಯಾರು? ಅನುಪತಿ ಪತ್ರ ಉಲ್ಲಂಘಿಸಲು ಹೇಳಿದ್ದು ಯಾರು? ಎಷ್ಟು ದಿನಗಳಿಂದ ಶಾಂತಿ ಕದಡಲು ಬಿಜೆಪಿ ಕಾದಿತ್ತು. ತ್ರಿವರ್ಣ ಧ್ವಜ ವಿರೋಧಿಸಿದ್ದ ಆರ್ ಎಸ್ಎಸ್ ಹೇಳಿಕೊಟ್ಟಂತೆ ಬಿಜೆಪಿಗೆ ತಿರಂಗಾ ಕಂಡರೆ ಆಗಿ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದು, ಈ ಕುರಿತು ಎಕ್ಸ್ ನಲ್ಲಿ ಸಹ ಬರೆದಿದ್ದಾರೆ.