ಕೋರವಾರದಲ್ಲಿ ನೀರಿನ ಸಮಸ್ಯೆ, ತಹಶೀಲ್ದಾರ್-ಗ್ರಾಮಸ್ಥರ ನಡುವೆ ಜಟಾಪಟಿ

191

ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸಿ

ಸಿಂದಗಿ: ತಾಲೂಕಿನ ಕೋರವಾರ ಗ್ರಾಮದಲ್ಲಿ ನೀರಿನ ಸಮಸ್ಯೆ ಜೋರಾಗಿದೆ. ಇದರಿಂದಾಗಿ ಗ್ರಾಮಸ್ಥರ ಕೂಡಿಕೊಂಡು ಕೆರೆಯ ಹತ್ತಿರ ಬಾವಿ ತೋಡಲು ಮುಂದಾಗಿದ್ದಾರಂತೆ. ಜೆಸಿಬಿಯಿಂದ ಬಾವಿ ತೋಡಲು ಮುಂದಾದಾಗ ತಹಶೀಲ್ದಾರ್ ಬಂದು ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹಾಗೂ ಗ್ರಾಮಸ್ಥರ ನಡುವೆ ಜಟಾಪಟಿ ನಡೆದು, ಜೆಸಿಬಿ ಕೀ ಕಸೆದುಕೊಂಡು ಹೋಗಿದ್ದಾರೆಂದು ಹೇಳಲಾಗುತ್ತಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬೇರೆ ಊರಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ..




Leave a Reply

Your email address will not be published. Required fields are marked *

error: Content is protected !!