ಸ್ವಾಮೀಜಿ ವಿಡಿಯೋ ಲೀಕ್ ಬೆದರಿಕೆ: 6 ಮಂದಿ ವಿರುದ್ಧ ಎಫ್ಐಆರ್

96

ಪ್ರಜಾಸ್ತ್ರ ಸುದ್ದಿ

ಕುಣಿಗಲ್: ತಾಲೂಕಿನ ಹಂಗರಹಳ್ಳಿಯ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ ಬಾಲ ಮಂಜುನಾಥ ಸ್ವಾಮೀಜಿ ಖಾಸಗಿ ವಿಡಿಯೋ ಲೀಕ್ ಮಾಡಲಾಗುವುದು ಎಂದು ಬೆದರಿಸಿ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ 6 ಮಂದಿ ಎಫ್ಐಆರ್ ದಾಖಲಾಗಿದೆ.

ಎಚ್.ಎಸ್ ಅಭಿಷೇಕ್, ಶ್ರೀನಿವಾಸ್, ರಾಜೇಶ್, ನಂದೀಶ್, ಚೇತನ್ ಹಾಗೂ ಯುವತಿಯೊಬ್ಬಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸ್ವಾಮೀಜಿಗೆ ಚರ್ಮರೋಗ ಕಾಣಿಸಿಕೊಂಡಿದೆ. ಇದನ್ನು ಆಪ್ತ ಅಭಿಷೇಕ್ ಬಳಿ ಹೇಳಿದ್ದಾರಂತೆ. ಅವನು ತಮ್ಮ ಪರಿಚಯಸ್ಥರು, ವೈದ್ಯ ಎಂದು ಹೇಳಿ ಯುವತಿಗೆ ತೋರಿಸಿ ಎಂದಿದ್ದನಂತೆ ಸ್ವಾಮೀಜಿ ಇದಕ್ಕೆ ಒಪ್ಪಿರಲಿಲ್ಲವಂತೆ.

ಮುಂದೆ ಚರ್ಮರೋಗ ಕಾಣಿಸಿಕೊಂಡ ಜಾಗದ ಚಿತ್ರ ತೆಗೆದು ಕಳಸಲಾಗಿದ್ದು, ಔಷಧಿ, ಮುಲಾಮು ಕೊಟ್ಟಿದ್ದಾರೆ. ಕಡಿಮೆಯಾಗದಿದ್ದಾಗ ಯುವತಿಗೆ ಫೋನ್ ಸಮಸ್ಯೆ ಹೇಳಿದ್ದಾರೆ. ನಂತರ ವಿಡಿಯೋ ಕಾಲ್ ಮಾಡಿ ಚರ್ಮರೋಗ ಕಾಣಿಸಿಕೊಂಡ ಜಾಗ ತೋರಿಸಿದ್ದಾರಂತೆ. ಈ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!