ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬೆದರಿಕೆ ಮೇಲ್ ಬಂದ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಅವರಿಗೂ ಬೆದರಿಕೆ ಮೇಲ್ ಬಂದಿದೆಯಂತೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವರು, ನನಗೂ ಬೆದರಿಕೆ ಮೇಲ್ ಬಂದಿದೆ. ಈಗಾಗ್ಲೇ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನ ಹಲವು ಶಾಲೆ ಬೆದರಿಕೆ ಮೇಲ್ ಬಂದಿದ್ದವು. ನಗರಾದ್ಯಂತ ಕೆಟ್ಟೆಚ್ಚರ ವಹಿಸಲಾಗಿದೆ.
ಬೇರೆ ದೇಶದ ಏಜೆನ್ಸಿಗಳು, ಫೇಸ್ ಬುಕ್, ಗೂಗಲ್ ರೀತಿಯ ಕಂಪನಿಗಳು ನಮಗೆ ಸಹರಿಸುತ್ತಿಲ್ಲ. ಇದರಿಂದಾಗಿ ಇಂತಹ ಪ್ರಕರಣಗಳನ್ನು ಭೇದಿಸುವುದು ಸ್ವಲ್ಪ ಕಷ್ಟವಾಗುತ್ತಿದೆ ಅಂತಾ ಹೇಳಿದರು.