ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಆ್ಯಸಿಡ್ ದುರ್ಬಳಕೆಯಾಗುತ್ತಿದ್ದು, ಇದರಿಂದ ಹೆಣ್ಮಕ್ಕಳು ದೌರ್ಜನ್ಯ ಎದುರಿಸುತ್ತಿದ್ದಾರೆ. ಹೀಗಾಗಿ ಎಲ್ಲರ ಕೈಗೆ ಸುಲಭವಾಗಿ ಆ್ಯಸಿಡ್ ಸಿಗದಂತೆ ಸಂಬಂಧಪಟ್ಟ ಇಲಾಖೆಗೆ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಇನ್ನೆರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಆ್ಯಸಿರ್ ಯಾರಿಗೆ ಅಗತ್ಯ ಇರುತ್ತೆ ಅವರಿಗೆ ಮಾತ್ರ ಸಿಗುವಂತೆ, ಸಾರ್ವಜನಿಕರೆಲ್ಲರ ಕೈಗೂ ಅದು ಸಿಗದಂತೆ ಉದ್ಯಮಿಗಳಿಗೆ, ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತೆ ಎಂದು ತಿಳಿಸಿದ್ದಾರೆ.