ಡೆಡ್ಲಿ ಕರೋನಾ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮೋದಿ ಇಡೀ ದೇಶ ಒಗ್ಗಟ್ಟಾಗಿದೆ ಎಂದು ಸಾರಲು, ದೀಪ ಬೆಳಗಿಸಿ ಎಂದು ಕರೆ ನೀಡಿದ್ರು. ಮನೆಯಲ್ಲಿರುವ ಎಲ್ಲ ಲೈಟ್ಸ್ ಆಫ್ ಮಾಡಿ ಹಣತೆ, ಮೇಣದ ಬತ್ತಿ, ಟಾರ್ಚ್ ಲೈಟ್ ಹಿಡಿಯುವ ಮೂಲಕ ಅಖಂಡ ಭಾರತ ಒಂದು ಎಂದು ಜಗತ್ತಿಗೆ ಸಾರಿ ಎಂದಿದ್ರು. ಅದರಂತೆ ಎಲ್ಲೆಡೆ ದೀಪಗಳು ಬೆಳಗಿವೆ. ಸಿಂ ಬಿ.ಎಸ್ ಯಡಿಯೂರಪ್ಪ ಆದಿಯಾಗಿ ಎಲ್ಲರೂ ದೀಪ ಬೆಳಗಿದ್ದಾರೆ.
ದೇಶದ ಮೂಲೆ ಮೂಲೆಯಲ್ಲಿ ದೀಪ ಬೆಳಗಿಸುವ ಮೂಲಕ ಕರೋನಾ ವಿರುದ್ಧದ ಸಮರದಲ್ಲಿ ನಾವೆಲ್ಲ ಒಂದಾಗಿದ್ದೇವೆ ಎಂದು ಸಾರಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಯೊಂದಿಗೆ ನಾವೆಲ್ಲ ಇದ್ದೇವೆ ಎಂದು ಸಾರಿದ್ದಾರೆ. ರಾಜ್ಯದ ಬೇರೆ ಬೇರೆ ಭಾಗದಲ್ಲಿನ ಕರೋನಾ ಸಮರದ ವಿರುದ್ಧ ಸಾರಿದ ದೀಪದ ಫೋಟೋಗಳು ಇಲ್ಲಿವೆ ನೋಡಿ..
ಪ್ರಧಾನಿ ಮೋದಿ ಕರೆ ನೀಡಿದ್ದ ದೀಪ ಬೆಳಗುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿರೋಧಗಳು, ಟೀಕೆಗಳು ವ್ಯಕ್ತಿವಾಗಿದ್ವು. ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಜನರು ಟ್ರೋಲ್ ಮಾಡಿದ್ರು. ವಿರೋಧ ಪಕ್ಷಗಳು ಸೇರಿದಂತೆ ಹಲವಾರು ಮಂದಿ ವಾಗ್ದಾಳಿ ನಡೆಸಿದ್ರು. ಇದರ ನಡುವೆಯೂ ದೇಶದ ಜನತೆಗೆ ದೀಪ ಬೆಳಗಿಸಿ ಕರೋನಾ ಓಡಿಸಲು ಮುಂದೆ ಬರುವ ಮೂಲಕ ಮಹಾಮಾರಿ ವಿರುದ್ಧ ಸಮರ ಸಾರಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿ ಕಾಣಿಸಿಕೊಂಡ ಚಿತ್ರಣ ಇಲ್ಲಿದೆ..
ಧಾರವಾಡದಲ್ಲಿಯೂ ದೀಪ ಬೆಳಗಿ ಬೆಂಬಲ ಸೂಚಿಸಲಾಗಿದೆ.ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಜಯಾನಂದ ಶೆಟ್ಟಿ ಹಾಗೂ ಅವರ ಕುಟುಂಬದ ಸದಸ್ಯರು ಬೆಳಗುವ ಮೂಲಕ ಪ್ರಧಾನಿ ಮೋದಿ ಕರೆಗೆ ಬೆಂಬಲ ಸೂಚಿಸಿದರು.
ಧಾರವಾಡದ ಜಯನಗರ ನಿವಾಸಿಗಳಾದ ಸವಿತಾ ಪರಂಡಿ ಮತ್ತು ಅವರ ಪುತ್ರ ಸ್ವರೂಪ ದೀಪ ಬೆಳಗುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೊರೊನಾ ವಿರುದ್ಧದ ಕರೆಗೆ ಬೆಂಬಲ ನೀಡಿದರು.
ಶಕ್ತಿ ಕಾಲೋನಿಯ ಶ್ರೀಶೈಲ ಕೋಳಿವಾಡ ಅವರ ಮೊಮ್ಮಗಳು ದೀಪ ಹಿಡಿದು ಕರೋನಾ ವಿರುದ್ಧ ಸಮರ ಸಾರಿದ್ದಾಳೆ.
ಉತ್ತರ ಕರ್ನಾಟಕ ಭಾಗದ ಖ್ಯಾತ ಬಂಥನಾಳ ಮಠದಲ್ಲಿ ವೃಷಭಲಿಂಗ ಶ್ರೀಗಳು ದೀಪ ಬೆಳಗಿಸಿದ್ರು. ಇಂಡಿ ತಾಲೂಕಿನ ಬಂಥನಾಳ ಗ್ರಾಮದಲ್ಲಿರುವ ಮಠ.
ವಿಜಯಪುರದ ಜಿಲ್ಲಾಸ್ಪತ್ರೆಯ ಕ್ವಾಟರ್ಸ್ ನಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸ್ಥಾಯಿ ಸಮಿಸಿ ಅಧ್ಯಕ್ಷರ ಕುಟುಂಬ ದೀಪ ಬೆಳಗಿ ಮೋದಿ ಕರೆಗೆ ಸಾಥ್ ನೀಡಿದ್ದಾರೆ.
ಸಿಂದಗಿ ಪಟ್ಟಣದಲ್ಲಿಯೂ ದೀಪ ಬೆಳಗಿ ಬೆಂಬಲ ಸೂಚಿಸಲಾಗಿದೆ. ನಾಗೂರ್ ಲೇಔಟ್ ನಲ್ಲಿ ಶಿವಲೀಲಾ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಕುಟುಂಬದವರಿಂದ, 3ನೇ ವಾರ್ಡಿ ನಲ್ಲಿ ಮಲ್ಲು ಹಿರೋಳ್ಳಿ, ಶಿವಾನಂದ ಶಹಾಪೂರ ಕಟುಂಬದವರು ದೀಪ ಹಾಗೂ ಟಾರ್ಚ್ ಹಿಡಿಯುವ ಮೂಲಕ ಕರೋನಾ ವಿರುದ್ಧದ ಸಮರದಲ್ಲಿ ಭಾಗವಹಿಸಿದ್ರು.
ಮಂಡ್ಯ ಜಿಲ್ಲೆ ಬಸರಾಳ ಗ್ರಾಮದಲ್ಲಿನ ಜನರು ಸಹ ದೀಪಿ ಬೆಳಗಿಸಿ ಮೋದಿ ಕರೆಗೆ ಬೆಂಬಲ ಸೂಚಿಸಿದ್ದಾರೆ.
ಅಥಣಿಯಲ್ಲಿಯೂ ದೀಪ ಬೆಳಗುವ ಮೂಲಕ ಕರೋನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ದೀಪ ಬೆಳಗಿದ ಜನತೆ. ರಮೇಶ ಮೊಯ್ಲಿ, ಆಕಾಶ, ಫಾಯಜ, ಅಖಿಲ್ ಹಾಗೂ ರಿಯಾ ಆಟ್ಸ್ ಇದ್ದಾರೆ.
ಮಡಿಕೇರಿಯಲ್ಲಿ ಶ್ರೀಮತಿ ಜಯಲಕ್ಷ್ಮಿ ಅವರ ಕುಟುಂಬಸ್ಥರಿಂದ ದೀಪ ಬೆಳಗಲಾಯ್ತು. ಮಂಜುಳ, ರೋಜ, ಮೌನ ಇದ್ದಾರೆ.