ಪ್ರಜಾಸ್ತ್ರ ಸುದ್ದಿ
ಮಂಡ್ಯ: ಕುರಿಗಾಹಿ ಹುಡುಗನೊಬ್ಬನನ್ನ ಮರಕ್ಕೆ ಕಟ್ಟಿಹಾಕಿ ದೌರ್ಜನ್ಯವೆಸಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಗ್ರಾಮದಲ್ಲಿ ನಡೆದಿದೆ. ಜಮೀನೊಂದಕ್ಕೆ ಕುರಿಗಳು ನುಗ್ಗಿದಕ್ಕೆ ಸಿಟ್ಟಾದ ಜಮೀನು ಮಾಲೀಕ ಬಾಲಕ ಹರ್ಷಾ ಎಂಬಾತನನ್ನ ಮರಕ್ಕೆ ಕಟ್ಟಿ ಹಾಕಿದ್ದಾನೆ.
ಬಾಲಕನನ್ನ ಮರಕ್ಕೆ ಕಟ್ಟಿಹಾಕಿರುವುದನ್ನ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ಬಿಡಿಸಿಕೊಂಡು ಬಂದಿದ್ರು. ಆದ್ರೆ, ಜಮೀನು ಮಾಲೀಕ ಮತ್ತೆ ಆ ಹುಡುಗನನ್ನ ಕರೆದುಕೊಂಡು ಹೋಗಿದ್ದಾನೆ. ಹೀಗಾಗಿ ಸ್ಥಳಕ್ಕೆ ಪೊಲೀಸರು ಬಂದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಮೀನು ಮಾಲೀಕ ಸ್ಟೇಷನ್ ಬೇಲ್ ಮೇಲೆ ಹೊರ ಬಂದಿದ್ದಾನೆ.