ನವದೆಹಲಿ: ಡೆಡ್ಲಿ ಕರೋನಾ ಭೀತಿಯಿಂದ ದೇಶ ಬಹುತೇಕ ಲಾಕ್ ಡೌನ್ ಆಗಿದೆ. ಆದ್ರೆ, ಇದನ್ನ ಜನರು ಗಂಭೀರವಾಗಿ ತೆಗೆದುಕೊಳ್ತಿಲ್ಲವೆಂದು ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ನಿನ್ನೆ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದ್ರು. ಆದ್ರೆ, ಇಂದು ಲಾಕ್ ಡೌನ್ ಗಂಭೀರವಾಗಿ ಪಾಲಿಸುತ್ತಿಲ್ಲವೆಂದಿದ್ದಾರೆ.
ಕರೋನಾ ವೈರಸ್ ತಡೆಗಟ್ಟಲು ಕೇಂದ್ರ ಸರ್ಕಾರ ನಿರ್ದೇಶಿಸಿರುವ ಕ್ರಮಗಳನ್ನ ಹಾಗೂ ಮಾರ್ಗಸೂಚಿಗಳನ್ನ ಸರಿಯಾದ ರೀತಿಯಲ್ಲಿ ಪಾಲಿಸಿ. ಜನರು ಲಾಕ್ ಡೌನ್ ಸರಿಯಾಗಿ ಅನುಸರಿಸ್ತಿದ್ದಾರೋ ಇಲ್ವೋ ಎಂದು ಪರಿಶೀಲಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ.
ನಿನ್ನೆ ಜನತಾ ಕರ್ಫೂ ಆಚರಿಸಿದ ಜನ ಇಂದು ಸಂಪೂರ್ಣವಾಗಿ ಬೀದಿಗೆ ಇಳಿದಿದ್ದಾರೆ. ಎಲ್ಲೆಡೆ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು, ರಸ್ತೆಗಳು ಗಿಜಿಗಿಜಿ ಅನ್ನುತ್ತಿವೆ. ಮಾರ್ಚ್ 31ರ ತನಕ ಲಾಕ್ ಡೌನ್ ಇದೆ. ದಯವಿಟ್ಟು ಸಾರ್ವಜನಿಕರು ಅಗತ್ಯವಿದ್ರೆ ಮಾತ್ರ ಹೊರ ಬನ್ನಿ. ವಿನಾಃ ಯಾವುದೇ ಕಾರಣಕ್ಕೂ ಹೊರ ಬಂದು ಡೆಡ್ಲಿ ಕರೋನಾ ಸೋಂಕಿಗೆ ಬಲಿಯಾಗಬೇಡಿ. ಈಗಾಗ್ಲೇ ಸರ್ಕಾರಗಳು ನೀಡಿರುವ ಮಾರ್ಗಸೂಚಿಗಳನ್ನ ಅನುಸರಿಸುವುದು ಒಳ್ಳೆಯದು. ಜನತಾ ಕರ್ಫ್ಯೂ ಮುಗಿದ್ಮೇಲೆ ಹೊರಗೆ ಬರೋದು ಅಲ್ಲ. ಸಾಧ್ಯವಾದಷ್ಟು ಮನೆಯಲ್ಲಿರುವ ಪ್ರಯತ್ನ ಮಾಡಿದಾಗ ಕರೋನಾ ನಿಯಂತ್ರಣ ಸಾಧ್ಯ.