ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪ್ರತಿ ಭಾನುವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕುರಿ ಸಂತೆ ನಡೆಯುತ್ತೆ. ಇದಕ್ಕಾಗಿ ಸುತ್ತಲಿನ ನೂರಾರು ರೈತರು ತಮ್ಮ ಕುರಿಗಳನ್ನು ತೆಗೆದುಕೊಂಡು ಬರುತ್ತಾರೆ. ಆದರೆ, ದಿನಗಳು ಕಳೆದಂತೆ ಕುರಿ ಸಂತೆ ನಡು ರಸ್ತೆಗೆ ಬರುತ್ತಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ.
ಎಪಿಎಂಸಿ ಆವರಣದಲ್ಲಿ ಸಾಕಷ್ಟು ವಿಶಾಲವಾದ ಜಾಗವಿದೆ. ಅದು ಇರುವುದು ರೈತರ ಸಲುವಾಗಿಯೇ. ಆದರೆ, ಗೇಟ್ ಮುಂಭಾಗದಿಂದ ಹಿಡಿದು ರಸ್ತೆ ಮಧ್ಯದಲ್ಲಿ ವ್ಯಾಪಾರ ನಡೆಸಲಾಗುತ್ತಿದೆ. ಕುರಿ ಸಂತೆಗೆ ಬರುವವರು ತಮ್ಮ ವಾಹನಗಳನ್ನು ಸಹ ರಸ್ತೆಯ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ.
ಎಪಿಎಂಸಿಯ ವ್ಯವಸ್ಥಾಪಕ ನಿರ್ದೇಶಕರಾಗಲಿ, ಅಧ್ಯಕ್ಷರಾಗಲಿ ಈ ಬಗ್ಗೆ ಯಾವುದೇ ರೀತಿ ಸೂಕ್ತ ಕ್ರಮ ತೆಗೆದುಕೊಂಡು, ಕುರಿ ಸಂತೆಯನ್ನು ಎಪಿಎಂಸಿ ಆವರಣದೊಳಗೆ ಮಾಡಿಕೊಳ್ಳುವಂತೆ ವ್ಯವಸ್ಥೆ ಮಾಡುತ್ತಿಲ್ಲ ಹೀಗಾಗಿ ವಾಹನ ಸವಾರರ ಪರದಾಟ ಮಾತ್ರ ತಪ್ಪಿಲ್ಲ.