ಮಹಾರಾಷ್ಟ್ರಕ್ಕೆ ಬುದ್ದಿ ಕಲಿಸಲು ಮುಂದಾದ ಎಪಿಎಂಸಿ ಕಾರ್ಮಿಕರು

219

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಕನ್ನಡದ ಧ್ವಜ ಸುಟ್ಟಿರುವುದು, ಅಲ್ಲಿನ ಬಸ್ ಗಳಿಗೆ ಹಾನಿ ಮಾಡಿರುವುದು ಅಲ್ಲದೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿದ್ದಾರೆ. ಇದು ದೊಡ್ಡ ಮಟ್ಟದ ಗುದ್ದಾಟಕ್ಕೆ ಕಾರಣವಾಗಿದ್ದು, ಮಹಾ ಸರ್ಕಾರಕ್ಕೆ ಬುದ್ದಿ ಕಲಿಸಲು ಇದೀಗ ಬೆಂಗಳೂರು ಎಪಿಎಂಸಿ ಕಾರ್ಮಿಕರು ಮುಂದಾಗಿದ್ದಾರೆ.

ಮಹಾರಾಷ್ಟ್ರದಿಂದ ಬರುವ ಲಾರಿಗಳಲ್ಲಿನ ವಸ್ತುಗಳನ್ನು ಲೋಡ್ ಹಾಗೂ ಅನ್ ಲೋಡ್ ಮಾಡದೆ ಸರಕು ಸಾಗಾಟಕ್ಕೆ ಬ್ರೇಕ್ ಹಾಕಲು ಇಲ್ಲಿನ ಕಾರ್ಮಿಕರು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಾರ್ಮಿಕರ ಸಂಘದ ಅಧ್ಯಕ್ಷ ಅರುಣ್ ಪರಮೇಶ್, ಕನ್ನಡಿಗರು ಹಾಗೂ ಕರ್ನಾಟಕದ ಮೇಲೆ ದಬ್ಬಾಳಿಕೆ ಮಾಡಿದರೆ ಸಹಿಸಲ್ಲ. ಎಂಇಎಸ್ ಪುಂಡರ ಪುಂಡಾಟಿಕೆಯನ್ನು ಖಂಡಿಸುವ ಬದಲು ಕನ್ನಡಿಗರ ವಿರುದ್ಧ ಮಾತನಾಡಿರುವ ಮಹಾರಾಷ್ಟ್ರ ಸಿಎಂ ಠಾಕ್ರೆಗೆ ಬುದ್ದಿ ಕಲಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!