ಸರ್ಕಾರದ ಮಾರ್ಗಸೂಚಿ.. ಚಿತ್ರರಂಗದ ಪರ ಡಿಕೆಶಿ ಬ್ಯಾಟಿಂಗ್

299

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಶುಕ್ರವಾರ ಸಂಜೆ ದಿಢೀರ್ ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅದರಲ್ಲಿ ಸಿನಿಮಾ ಮಂದಿರಗಳಲ್ಲಿ ಶೇಕಡ 50ರಷ್ಟು ಸೀಟ್ ಭರ್ತಿಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗ್ತಿದೆ.

ಪುನೀತರಾಜಕುಮಾರ ನಟನೆಯ ಯವರತ್ನ ಸಿನಿಮಾ ಗುರುವಾರವಷ್ಟೇ ರಿಲೀಸ್ ಆಗಿದ್ದು, ಇಡೀ ಚಿತ್ರತಂಡ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದೆ. ಇದರ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ಕೋವಿಡ್ ಗೈಡ್ ಲೈನ್ಸ್ ಅಟ್ಟರ್ ಫ್ಲಾಪ್ ಎಂದಿದ್ದಾರೆ.

ಬಸ್, ಕಾರ್ ನಲ್ಲಿ ಜೊತೆ ಜೊತೆಯಾಗಿ ಹೋಗಬಹುದು. ಥಿಯೇಟರ್ ನಲ್ಲಿ ಜೊತೆ ಜೊತೆಯಾಗಿ ಕುಳಿತುಕೊಳ್ಳಬಾರದಂತೆ. ಮನೆಯಲ್ಲಿ ಗಂಡ, ಹೆಂಡ್ತಿ, ಮಕ್ಕಳು ಜೊತೆಯಾಗಿ ಇರ್ತಾರೆ. ಥಿಯೇಟರ್ ಗೆ ಬಂದ್ರೆ ದೂರ ದೂರ ಕುಳಿತುಕೊಳ್ಳಬೇಕು ಅಂದ್ರೆ ಹೇಗೆ? ಇವರೇನು ಟ್ಯಾಕ್ಸ್ ಅರ್ಧ ಪಡೆದುಕೊಳ್ತಾರಾ, ಪ್ರ್ಯಾಕ್ಟಿಕಲ್ ಜ್ಞಾನ ಇಲ್ಲವೆಂದು ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!