ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಎಲ್ಲೆಡೆ ಕೋವಿಡ್ ರೂಪಾಂತರ ಓಮಿಕ್ರಾನ್ ಹಾವಳಿ ಶುರುವಾಗಿದೆ. ಎರಡು ವರ್ಷಗಳ ಕಾಲ ಕಷ್ಟ ಅನುಭವಿಸಿದ ಜನತೆಗೆ ಇದೀಗ ಸಂಕಷ್ಟ ಶುರುವಾಗಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ಸೋಂಕು ಹೆಚ್ಚುತ್ತಿರುವ ಕಡೆ ಲಾಕ್ ಡೌನ್ ಮಾಡುವ ಸುಳಿವನ್ನು ಕಂದಾಯ ಸಚಿವ ಆರ್.ಅಶೋಕ್ ನೀಡಿದ್ದಾರೆ. ಇದೆಲ್ಲದರ ನಡುವೆ ಇಂದಿನಿಂದ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ.
ಇಂದಿನಿಂದ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಮೇಳ ಶುರು ಮಾಡಲಾಗುತ್ತಿದೆ. ಈಗಾಗ್ಲೇ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದು, ಶಾಸಕರು ಹಾಗೂ ಸಚಿವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಲಸಿಕೆ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಈ ಮೂಲಕ 15ರಿಂದ 18 ವರ್ಷದ ಮಕ್ಕಳಿಗೂ ಲಸಿಕೆ ಹಾಕುವ ಕಾರ್ಯ ಶುರುವಾಗಲಿದೆ.
ಇನ್ನು ಈಗಾಗ್ಲೇ ಎರಡು ಡೋಸ್ ಲಸಿಕೆ ಹಾಕಿಕೊಂಡವರಿಗೆ ಬೋಸ್ಟರ್ ಡೋಸ್ ನೀಡಬೇಕು ಅನ್ನೋ ಚರ್ಚೆ ನಡೆದಿದೆ. ಇದು ಯಾವಾಗಿನಿಂದ ಶುರುವಾಗುತ್ತೆ. ಮೊದಲರಿಗೆ ಯಾರಿಗೆಲ್ಲ ಪ್ರಾಮುಖ್ಯತೆ ನೀಡಲಾಗುತ್ತೆ ಅನ್ನೋದು ತಿಳಿಯಬೇಕಿದೆ.