ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು: ನನಗೆ ಕುಡಿಯುವ ಅಭ್ಯಾಸವಿಲ್ಲ. ಆದರೂ ನನಗೆ ಕುಡುಕನ ಪಟ್ಟ ಕಟ್ಟಿದ್ರು. ಆದ್ರೆ, ನೆಹರು ಅವರು ಹುಕ್ಕಾ ಸೇದುವ ಹಲವು ಫೋಟೋಗಳಿವೆ. ಸೋಷಿಯಲ್ ಮೀಡಿಯಾ, ಪತ್ರಿಕೆಗಳಲ್ಲಿಯೂ ಬಂದಿವೆ. ಅದನ್ನು ಆಧರಿಸಿ ನಾನು ಹೇಳಿದ್ದೇನೆ ಎಂದು, ಇಂದಿರಾ ಕ್ಯಾಂಟೀನ್ ವಿಚಾರಕ್ಕೆ ಸಂಬಂಧಿಸಿದಂತೆ ಸಿ.ಟಿ ರವಿ ಸಮರ್ಥಿಸಿಕೊಂಡರು.
ನಾನು ಬೆಳಗ್ಗೆ 5 ಗಂಟೆಗೆದ್ದು ಯೋಗ ಮಾಡುತ್ತೇನೆ. ರಾತ್ರಿ 11 ಗಂಟೆಯ ತನಕ ದೇಶದ ಬಗ್ಗೆ ಕೆಲಸ, ಚಿಂತನೆ ಮಾಡುತ್ತೇನೆ. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕ ಕೊತ್ವಾಲ್ ರಾಮಚಂದ್ರನ ಶಿಷ್ಯನಲ್ಲ ಎಂದು ವಾಗ್ದಾಳಿ ನಡೆಸಿದ್ರು.
ನಾನು ನೆಹರು, ಇಂದಿರಾ ಅವರ ಬಗ್ಗೆ ಮಾತ್ನಾಡಿದ್ದಕ್ಕೆ ತಪ್ಪು ಅಂತಾರಲ್ಲ, ಸಿದ್ದರಾಮಯ್ಯ, ಸಿ.ಎಂ ಇಬ್ರಾಹಿಂ ಈ ಹಿಂದೆ ಏನು ಹೇಳಿದ್ರು. ಹಳೆಯ ಭಾಷಣದ ಪ್ರತಿ ಹಾಕಿಸಬೇಕು ಎಂದು ಕೇಳುವ ಮೂಲಕ ಸಿ.ಟಿ ರವಿ ಕಿಡಿ ಕಾರಿದ್ರು.