ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಇದೀಗ ಎಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡುತ್ತಿದೆ. ನವರಾತ್ರಿಯು ಎಲ್ಲೆಡೆ ಕಳೆ ತುಂಬಲಿದ್ದು, ಕೆಲಸದ ನಿಮಿತ್ತ ಬೇರೆ ಊರಿನಲ್ಲಿರುವ ಜನರು ವಿಜಯದಶಮಿಯ ಸಂದರ್ಭದಲ್ಲಿ ಊರಿಗೆ ಹೊರಡಲು ಪ್ಲಾನ್ ಮಾಡಿರುತ್ತಾರೆ. ಹೀಗಾಗಿ ಕೆಎಸ್ಆರ್ ಟಿಸಿಯ ಕೇಂದ್ರ ಕಚೇರಿಯಿಂದ 1000 ಹೆಚ್ಚುವರಿ ಬಸ್ ಬಿಡಲಾಗುತ್ತಿದೆ.
ಅಕ್ಟೋಬರ್ 13 ರಿಂದ 21ರ ತನಕ ಬೆಂಗಳೂರು ನಗರದಿಂದ ವಿವಿಧ ಜಿಲ್ಲೆಗಳಿಗೆ ಹೆಚ್ಚುವರಿ ಬಸ್ ಸಂಚರಿಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದ್ದು, ವೆಬ್ ಸೈಟ್ ಮೂಲಕ ಸೀಟ್ ಗಳನ್ನು ಮುಂಗಡವಾಗಿ ಬುಕ್ ಮಾಡಬಹುದು.