ಮೈಸೂರು: ಮುಂದಿನ ದಿನಗಳಲ್ಲಿ ದಸರಾ ಪ್ರಾಧಿಕಾರ ನಿರ್ಮಿಸಲಾಗುತ್ತೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ. ಈಗಾಗ್ಲೇ ಇದು ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ದಸರಾ ಮಹೋತ್ಸವ ಆಚರಣೆಗಾಗಿಯೇ ಪ್ರತ್ಯೇಕವಾಗಿ ದಸರಾ ಪ್ರಾಧಿಕಾರ ಮಾಡಲಾಗುತ್ತೆ ಅಂತಾ ಹೇಳಿದ್ದಾರೆ.
ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವರು, ಮೈಸೂರಿಗೆ ಪ್ರವಾಸಿಗರನ್ನ ಹೆಚ್ಚೆಚ್ಚು ಸೆಳೆಯಲು ರೂಪುರೇಷಗಳನ್ನ ರೂಪಿಸಲಾಗುವುದು ಅಂತಾ ಹೇಳಿದ್ದಾರೆ.