ಮೈಸೂರು: ನಾಡಹಬ್ಬ ದಸರಾ ಆಚರಣೆಯ ವಿಜಯದಶಮಿಯೆಂದು ಎಲ್ಲರ ಗಮನ ಸೆಳೆದ ಟ್ಯಾಬ್ಲೋಗಳಿಗೆ ಬಹುಮಾನ ಘೋಷಣೆ ಮಾಡಲಾಗಿದೆ.
ಚಾಮರಾಜನಗರ ಜಿಲ್ಲೆ ಸಂವೃದ್ಧಿ ಸಂಪತ್ತಿನ ನಡುವೆ ಹುಲಿಯ ತಾಣ ಸ್ತಬದ್ಧಚಿತ್ರಕ್ಕೆ ಪ್ರಥಮ ಬಹುಮಾನ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಕದಂಬ ಹಾಗೂ ಬನವಾಸಿಯ ಮಧುಕೇಶ್ವರ ದೇಗುಲದ ಟ್ಯಾಬ್ಲೋಗೆ ಎರಡನೇ ಬಹುಮಾನ ಸಿಕ್ಕಿದೆ. ತುಮಕೂರು ಜಿಲ್ಲೆಯ ಸಿದ್ಧಗಂಗಾ ಮಠದ ಶ್ರೀಗಳ ಸ್ತಬ್ಧಚಿತ್ರಕ್ಕೆ ಮೂರನೇ ಬಹುಮಾನ ಬಂದಿದೆ.
ಇನ್ನು ಮೈಸೂರು ಜಿಲ್ಲೆಯ ಫಿಟ್ ಇಂಡಿಯಾ ಸ್ತಬ್ಧಚಿತ್ರಕ್ಕೆ ಸಮಾಧನಕರ ಬಹುಮಾನ ಸಿಕ್ಕಿದೆ. ಮೂವರು ತಜ್ಞ ತೀರ್ಪುಗಾರರು ಟ್ಯಾಬ್ಲೋಗಳ ಆಯ್ಕೆ ಮಾಡಿದ್ದು, ಮೈಸೂರು ಜಿಲ್ಲಾಡಳಿತ ಬಹುಮಾನ ಘೋಷಣೆ ಮಾಡಿದೆ.