ಭರ್ಜರಿ ಸೌಂಡ್ ಮಾಡ್ತಿದೆ ಡಿಸಿ ಸಸಿಕಾಂತ ರಾಜೀನಾಮೆ

355

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸಿಂಥಿಲ್ ರಾಜೀನಾಮೆ ವಿಚಾರ ಭರ್ಜರಿಯಾಗಿ ಸೌಂಡ್ ಮಾಡ್ತಿದೆ. ಈ ಬಗ್ಗೆ ಸಿಎಂ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಡಿಸಿ ಸಸಿಕಾಂತ ಸಿಂಥಿಲ್ ಜೊತೆ ಮಾತ್ನಾಡಿ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೂಲಿಸುವ ಕೆಲಸ ಮಾಡಿ ಅಂತಾ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ರಾಜೀನಾಮೆ ಹಿಂದೆ, ವರ್ಗಾವಣೆ ದಂಧೆ ಅನ್ನೋದು ಒಂದ್ಕಡೆಯಿಂದ ಕೇಳಿ ಬರ್ತಿರುವ ಮಾತು. ಇನ್ನೊಂದು ಕಡೆ ಇದು ಕೇಂದ್ರ ಸರ್ಕಾರದ ಧೋರಣೆಯಿಂದ ಐಎಎಸ್ ಅಧಿಕಾರಿಗಳು ರಾಜೀನಾಮೆ ಸಲ್ಲಿಸ್ತಿದ್ದಾರೆ ಅಂತಾ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕೇಂದ್ರ ಸರ್ಕಾರ, ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನ ತನ್ಗೆ ಹೇಗೆ ಬೇಕೋ ಹಾಗೇ ಬಳಸಿಕೊಳ್ತಿದೆ ಅನ್ನೋ ಮಾತನ್ನ ಮಲ್ಲಿಕಾರ್ಜುನ ಹೇಳಿದ್ದಾರೆ. ಅಲ್ದೇ, ದೇಶದಲ್ಲಿ ಐಎಎಸ್ ಅಧಿಕಾರಿಯ ರಾಜೀನಾಮೆ ಎರಡನೆಯದು. ಕಾಶ್ಮೀರದಲ್ಲಿ ಐಎಎಸ್ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ರು. ಪ್ರಜಾಪ್ರಭುತ್ವ, ಸಂವಿಧಾನಬದ್ದ ಸರ್ಕಾರವಿಲ್ಲದ ಕಾರಣ, ಅಧಿಕಾರಿಗಳು ರಾಜೀನಾಮೆ ನೀಡ್ತಿದ್ದಾರೆ ಅಂತಾ ಹೇಳಿದ್ರು.

ಪರಿಷತ್ ಸದಸ್ಯ ಐವನ್ ಡಿಸೋಜಾ ಸಹ ರಾಜೀನಾಮೆ ಹಿಂದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಹೊಣೆ ಅನ್ನೋ ಮಾತನ್ನ ಹೇಳಿದ್ದಾರೆ. ಅಲ್ದೇ, ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಸಹ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!