ಪ್ರಜಾಸ್ತ್ರ ಸುದ್ದಿ
ಯಾದಗಿರಿ: ಸಿಡಿಲು ಬಡಿದು ರಾಸುಗಳು ಸಾವನ್ನಪ್ಪಿರುವ ಘಟನೆ ಬುಧವಾರ ಶಹಪುರ ತಾಲೂಕಿನ ಚಾಮನಾಳ ಗ್ರಾಮದಲ್ಲಿ ನಡೆದಿದೆ. ಕೊಟ್ಟಿಗೆಯಲ್ಲಿದ್ದ ಎತ್ತು, ಆಕಳು ಹಾಗೂ ಎಮ್ಮೆ ಮೃತಪಟ್ಟಿವೆ.
ಗ್ರಾಮದ ಭೀಮರಾಯ ಎಂಬುವರಿಗೆ ಸೇರಿದ ರಾಸುಗಳಾಗಿವೆ. ಸುಮಾರು 2 ಲಕ್ಷ ಮೌಲ್ಯದ ದನಕರಗಳು ಸಾವನ್ನಪ್ಪಿವೆ. ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು. ಜಿಲ್ಲೆಯಾದ್ಯಂತ ಬುಧವಾರ ಬೆಳಗ್ಗೆ ಸಾಕಷ್ಟು ಮಳೆಯಾಗಿದೆ.