ಪ್ರಜಾಸ್ತ್ರ ಸುದ್ದಿ
ನವದೆಹಲಿ: ಆಪ್ ಪಕ್ಷದ ಕಾರ್ಪೋರೇಟರ್ ವೊಬ್ಬರು ಹಾಲಿನಿಂದ ಸ್ನಾನ ಮಾಡಿದ ಘಟನೆ ನಡೆದಿದೆ. ಪೂರ್ವ ದೆಹಲಿಯ ಹಸೀಬ್ ಉಲ್ ಹಸನ್ ಹಾಲಿನಲ್ಲಿ ಸ್ನಾನ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶಾಸ್ತ್ರಿ ಪಾರ್ಕ್ ಹತ್ತಿರ ಚರಂಡಿ ಸಮಸ್ಯೆಯಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಏನೂ ಮಾಡಿಲ್ಲ. ಹೀಗಾಗಿ ಕೌನ್ಸಿಲರ್ ಹಸೀಬ್ ತಾವೇ ಚರಂಡಿಗೆ ಇಳಿದಿದ್ದಾರೆ. ನಂತರ ಅವರಿಗೆ ಬೆಂಬಲಿಗರೆಲ್ಲರು ಕೂಡಿಕೊಂಡು ಹಾಲಿನಲ್ಲಿ ಸ್ನಾನ ಮಾಡಿಸಿದ್ದಾರೆ.
ಅದೆಷ್ಟೋ ಬಡವರು ಹಸಿವಿನಿಂದ ಸಾಯುತ್ತಾರೆ. ಚರಂಡಿಗೆ ಇಳಿದರು ಅನ್ನೋ ಕಾರಣಕ್ಕೆ ಹಾಲಿನಲ್ಲಿ ಸ್ನಾನ ಮಾಡಿಸಿದ್ದು ಎಷ್ಟು ಸರಿ ಎಂದು ಸಾಮಾನ್ಯ ಜನರ ಪಕ್ಷದ ಕೌನ್ಸಲರ್ ನಡೆಯನ್ನು ಸಾಮಾನ್ಯ ಜನರೆ ಪ್ರಶ್ನಿಸುತ್ತಿದ್ದಾರೆ.