ಬಸವನಾಡಿನಲ್ಲಿ ಇದೆಂಥಾ ಘಟನೆ!

223

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ವಡವಡಗಿಯಲ್ಲಿ ಅಪ್ರಾಪ್ತ ಬಾಲಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. 12 ವರ್ಷದ ಅಪ್ರಾಪ್ತನಿಗೆ ಕಿರುಕುಳ ನೀಡಲಾಗಿದೆ.

ಬಾಲಕ ಎಲ್ಲರಿಗೂ ಅವಾಚ್ಯ ಶಬ್ಧಗಳಿಂದ ಬೈಯುತ್ತಿದ್ದ ಎಂದು, ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ. ಗ್ರಾಮದ ಹಣಮಂತರಾಯ ಮಡಿಕೇಶ್ವರ ಹಾಗೂ ಇತರರಿಂದ ಈ ದುಷ್ಕೃತ್ಯ ನಡೆದಿದೆಯಂತೆ. ಇದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ. ಈ ಘಟನೆಯನ್ನು ಅನೇಕರು ಖಂಡಿಸಿದ್ದಾರೆ. ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ




Leave a Reply

Your email address will not be published. Required fields are marked *

error: Content is protected !!