ಸ್ಪೀಕರ್ ಗೆ ದೂರು ನೀಡಿದ ದೇವನೂರು, ದೊರೆಸ್ವಾಮಿ

449

ಬೆಂಗಳೂರು: ರಾಜ್ಯ ರಾಜಕೀಯ ಬೆಳವಣಿಗೆಯಿಂದ ಅತ್ಯಂತ ಆಘಾತಕಾರಿಯಾಗಿದೆ ಅಂತಾ ಹಿರಿಯ ಸಾಹಿತಿ ದೇವನೂರು ಮಹಾದೇವ ಹಾಗೂ ಹಿರಿಯ ಸ್ವತಂತ್ರ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಅವರು ಹೇಳಿದ್ದಾರೆ. ಅಲ್ದೇ ಈ ಬಗ್ಗೆ ಅವರು ಸ್ಪೀಕರ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಶಾಸಕರು ಸಂವಿಧಾನಕ್ಕೆ ಅಪಚಾರವೆಸಗಿ ತಮ್ಮ ಕ್ಷೇತ್ರದ ಜನಕ್ಕೆ ಅನ್ಯಾಯ ಮಾಡ್ತಿದ್ದಾರೆ. ಇದನ್ನ ತಾಂತ್ರಿಕ ಕಾರಣವೆಂದು ನೋಡದೆ, ಸಾರ್ವಜನಿಕ ರಾಜಕೀಯ ನೀತಿಸಂಹಿತೆಯ ಭಾಗವಾಗಿ ನೋಡಬೇಕಿದೆ. ಈಗಿನ ಪರಿಸ್ಥಿತಿಯನ್ನ ನೋಡಿದ್ರೆ, ಇದು ಪಕ್ಷಾಂತರವೇ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಇಷ್ಟೆಲ್ಲ ಬೆಳವಣಿಗೆಯ ಹೊಣೆಯನ್ನ ಪ್ರಮುಖ ಮೂರು ಪಕ್ಷಗಳು ಹೊತ್ತುಕೊಳ್ಳಬೇಕಿದೆ ಅಂತಾ ಹೇಳಿದ್ದಾರೆ.

ಸಭಾಧ್ಯಕ್ಷರು ಇದನ್ನ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಗತ್ಯಬಿದ್ದರೆ ನಾವು ಕೋರ್ಟ್ ಗೆ ಹೋಗಲು ಸಿದ್ಧ ಅನ್ನೋ ಮಾತನ್ನ ಹೇಳಿದ್ದಾರೆ. ಸ್ಪೀಕರ್ ಗೆ ಸಲ್ಲಿಸಿರುವ ಪತ್ರಕ್ಕೆ ಸಾಹಿತಿ ದೇವನೂರು ಮಹಾದೇವ ಹಾಗೂ ಸ್ವತಂತ್ರ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರು ಸಹಿ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!