ಶಾಹಾಪೂರ: ಮಣಿಕಂಠನ್ ಚಾರಿಟೇಬಲ್ ಟ್ರಸ್ಟ್ ಕಳೆದ ಎರಡು ವರ್ಷಗಳಿಂದ ಅಮ್ಮಾ ಕ್ಯಾಂಟೀನ್ ನಡೆಸಿಕೊಂಡು ಬರ್ತಿದೆ. ಅದರ ವಾರ್ಷಿಕೋತ್ಸವವನ್ನ ಇಂದು ಶಾಹಾಪೂರ ನಗರದಲ್ಲಿ ಮಾಡಲಾಯ್ತು. ಯುವ ಮುಖಂಡ ಅಮರೇಶಗೌಡ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸಿದರು.
ಗುರು ಮಣಿಕಂಠನ್ ಎಂಬುವರ ತಾಯಿ ದಿ.ಲಕ್ಷ್ಮೀದೇವಿಯವರ ನೆನಪಿನಲ್ಲಿ ಅಮ್ಮಾ ಕ್ಯಾಂಟೀನ್ ನಡೆಸಲಾಗ್ತಿದೆ. ಇಂದು ಅವರ 35ನೇ ವರ್ಷದ ಸ್ಮರಣೋತ್ಸವದ ನೆನಪಿನಲ್ಲಿ ಕಾರ್ಯಕ್ರಮ ಮಾಡಲಾಯ್ತು. 10 ರೂಪಾಯಿಯಲ್ಲಿ ಊಟ ಮತ್ತು ಉಪಹಾರ ನೀಡುವ ಮೂಲಕ ಸಮಾಜ ಸೇವೆ ಮಾಡ್ತಿರುವ ಕಾರ್ಯಕ್ಕೆ ಉಪನ್ಯಾಸಕಿ ಲೀಲಾ ಕಾರಟಗಿ ಮೆಚ್ಚುಗೆ ವ್ಯಕ್ತಪಡಿಸಿದ್ರು.
ಸೂಗುರೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬಸವಯ್ಯ ಶರಣರು, ಹಿರಿಯ ಮುಖಂಡ ಚಂದ್ರಶೇಖರ ಸಾಹು ಆರಬೋಳ, ಕಸಾಪ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ, ಡಾ ಚಂದ್ರಶೇಖರ ಸುಬೇದಾರ ಬಸನಗೌಡ ಮರ್ಕಲ್ ಉಪಸ್ಥಿತರಿದ್ದರು.