ಪ್ರಜಾಸ್ತ್ರ ಸುದ್ದಿ
ವಿಜಯಪುರ: ನಗರಾದ್ಯಂತ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಮಾಹಿತಿ ನೀಡಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ನಗರ ಸ್ವಚ್ಚತೆ, ಮನೆ ಮನೆಗೆ ಪೌರ ಕಾರ್ಮಿಕರು ಸಂಚರಿಸಿ ಒಣ, ಹಸಿ ಸಂಗ್ರಹ ಮಾಡಲಾಗುತ್ತಿದ್ದು, ನಗರಾದ್ಯಂತ ಪಾರಂಪರಿಕ ತ್ಯಾಜ್ಯ 80 ಸಾವಿರ ಟನ್ ಕಸ ಸಂಗ್ರಹಿಸಲಾಗಿದೆ ಎಂದರು.
ಅಲ್ಲದೇ, ಹಳೆ ಕಸ ಸಾಗಿಸಿದ ಹಿನ್ನಲೆ 14 ಎಕರೆ ಜಾಗ ಉಳಿತಾಯ ಆಗಿದೆ. ಧೂಳ ಮುಕ್ತ ನಗರವನ್ನಾಗಿ ಮಾಡಲಾಗಿದೆ ಎಂದರು.