ನಾಳೆ ಟ್ರಂಪ್ ಜೊತೆಗಿನ ಔತಣಕೂಟದಲ್ಲಿ ಪ್ರತಿಪಕ್ಷ ನಾಯಕರು ಗೈರಾಗುವ ಪ್ಲಾನ್

374

ನವದೆಹಲಿ: ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗ್ಲೇ ದೆಹಲಿ ತಲುಪಿದ್ದಾರೆ. ನಾಳೆ ರಾಷ್ಟ್ರಪತಿ ಭವನದಲ್ಲಿ ಔತಣಕೂಟ ಏರ್ಪಡಿಸಲಾಗಿದೆ. ಇದಕ್ಕೆ ವಿರೋಧ ಪಕ್ಷದ ನಾಯಕರು ಗೈರಾಗುವ ಪ್ಲಾನ್ ಮಾಡಿದ್ದಾರೆ.

ಮನಮೋಹನ ಸಿಂಗ್-ಗುಲಾಂ ನಬಿ ಆಜಾದ್

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನ ಆಹ್ವಾನಿಸದೆ ಇರೋದಕ್ಕೆ ಮಾಜಿ ಪ್ರಧಾನಿ ಮನಮೋಹನ ಸಿಂಗ್, ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ಔತಣಕೂಟದಿಂದ ದೂರವಿರುವ ನಿರ್ಧಾರ ಮಾಡಿದ್ದಾರೆ.

ಸಿಎಂ ಕೇಜ್ರಿವಾಲ್ ಮತ್ತು ಡಿಸಿಎಂ ಸಿಸೋಡಿಯಾ

ಇನ್ನು ಟ್ರಂಪ್ ಪತ್ನಿ ಮೆಲಾನಿಯಾ ನಾಳೆ ಬೆಳಗ್ಗೆ ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಡಿಸಿಎಂ ಮನೀಷ ಸಿಸೋಡಿಯಾ ಅವರಿಗೆ ಆಹ್ವಾನ ನೀಡಿಲ್ಲ. ಹೀಗಾಗಿ ಇದು ಆಪ್ ನಾಯಕರ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಮೆರಿಕ ರಾಯಭಾರಿ, ಇದು ರಾಜಕೀಯ ಭೇಟಿ ಅಲ್ಲ. ಹೀಗಾಗಿ ಆಹ್ವಾನವಿಲ್ಲ ಎಂದಿದ್ದಾರೆ. ಆದ್ರೂ ದೆಹಲಿ ಸಿಎಂ ಆಗಮನದ ಸಾಧ್ಯತೆಯಿದೆ ಅಂತಾ ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!