ಅನರ್ಹರು ತ್ಯಾಗಿಗಳಲ್ಲ ಸ್ವಾರ್ಥಿಗಳು: ಸಿದ್ದರಾಮಯ್ಯ

352

ಮೈಸೂರು: ಅನರ್ಹ ಶಾಸಕರ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಅನರ್ಹ ಶಾಸಕರು ತ್ಯಾಗಿಗಳಲ್ಲ. ಅವರೇನು ಸ್ವತಂತ್ರ ಹೋರಾಟ ಮಾಡಿದ್ದಾರಾ? ಅವರು ಸ್ವಾರ್ಥಿಗಳು ಎಂದು ವಾಗ್ದಾಳಿ ನಡೆಸಿದ್ರು.

ಅವರು ಏನೇ ಕಥೆ ಹೇಳಿದ್ರೂ ಅನರ್ಹತೆ ಪಟ್ಟಿ ಇರುತ್ತೆ. ಅದನ್ನ ಅಂಟಿಸಿಕೊಂಡೆ ಹೋಗಬೇಕು. ಆಪರೇಷನ್ ಕಮಲದ ಬಗ್ಗೆ ಒಬ್ಬೊಬ್ಬರೆ ಮಾತ್ನಾಡ್ತಿದ್ದಾರೆ. ಕೋರ್ಟ್ ತೀರ್ಪಿನ ಬಳಿಕ ಒಂದೊಂದೆ ಹೊರ ಬರುತ್ತಿದೆ. ಬೈ ಎಲೆಕ್ಷನ್ ನಲ್ಲಿ ಬಿಜೆಪಿ 8 ಸ್ಥಾನ ಸಹ ಗೆಲ್ಲುವುದಿಲ್ಲ. ಚುನಾವಣೆ ಬಳಿಕ ಸರ್ಕಾರಕ್ಕೆ ಕಷ್ಟವಾಗುತ್ತೆ ಅಂತಾ ಹೇಳಿದ್ರು.

ಉಪ ಚುನಾವಣೆಯಲ್ಲಿ ಬಿಜೆಪಿ ಅಕ್ರಮ ಮಾಡಲು ರೆಡಿಯಾಗಿದೆ. ನಿನ್ನೆ ಸಿಪಿ ಯೋಗೇಶ್ವರ ಫೋಟೋ ಇರುವ ಸೀರೆ ಸಿಕ್ಕಿರುವುದೆ ಸಾಕ್ಷಿ. ಇದೆಲ್ಲ ಚುನಾವಣೆ ಅಕ್ರಮವನ್ನ ಎತ್ತಿ ತೋರಿಸುತ್ತೆ. ಇನ್ನು ಜೆಡಿಎಸ್ ಸ್ಟ್ಯಾಂಡ್ ಇಲ್ಲ. ಅದು ಯಾವತ್ತೂ ಸ್ಟ್ಯಾಂಡ್ ಇರುವುದಿಲ್ಲವೆಂದು ಅಣಕಿಸಿದ್ರು.




Leave a Reply

Your email address will not be published. Required fields are marked *

error: Content is protected !!