ಗೋಕಾಕ: ಕಾಂಗ್ರೆಸ್ ನಲ್ಲಿ ಸೀನಿಯರ್ ಆಗಿದ್ದೆ. ಆದ್ರೆ, ಡಿಕೆ ಶಿವಕುಮಾರ ಅವರು ನನ್ನ ಮೇಲೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ಕುರಿಸಲು ನೋಡಿದ್ರು. ಇದರ ಜೊತೆಗೆ ಜಿಲ್ಲೆಯ ರಾಜಕೀಯದಲ್ಲಿ ಪದೆಪದೆ ಹಸ್ತಕ್ಷೇಪ ಮಾಡ್ತಿದ್ರು. ಇದೇ ನಮ್ಮ ಭಿನ್ನಮತ ಸ್ಫೋಟಕ್ಕೆ ಕಾರಣವೆಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರಗೆ ಟಿಕೆಟ್ ಕೊಡಿಸಿ ತಪ್ಪು ಮಾಡಿದ್ದೇವು. ಸಮಿಶ್ರ ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಕೊಡಬೇಡಿ ಎಂದು ಒತ್ತಾಯಿಸಿದ್ದೆ. ನಮ್ಮ ಮಾತು ಮೀರಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ರು. ನಾನು ಇನ್ನು ಸುಮ್ಮನಿದ್ರೆ ಅವರನ್ನ ಸಚಿವರನ್ನಾಗಿ ಮಾಡ್ತಿದ್ರು ಅಂತಾ ಅಸಮಾಧಾನ ಹೊರ ಹಾಕಿದ್ರು.
ಕಾಂಗ್ರೆಸ್ ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ ನನಗಿಂತ ಕಿರಿಯಳು. ಆದ್ರೆ, ನನ್ನ ತಲೆ ಮೇಲೆ ಅವರನ್ನ ಕೂರಿಸಲು ನೋಡಿದ್ರು. ಇದು ನನ್ಗೆ ಸಹಿಸಲು ಆಗ್ಲಿಲ್ಲ. ಹೀಗಾಗಿ ನಾನು ಪಕ್ಷ ಬಿಡುವ ನಿರ್ಧಾರ ಮಾಡಲಾಯ್ತು ಅಂತಾ ಹೇಳಿದ್ರು. ಅಲ್ದೇ, ಲಕ್ಷ್ಮಿ ಹೆಬ್ಬಾಳ್ಕರ್ ಸಚಿವೆಯಾದ್ರೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುವಷ್ಟು ಸಣ್ಣವನಲ್ಲ. ಹಣೆಬರಹದಲ್ಲಿ ಆಗಲಿ ಅಂತಾ ಹೇಳಿದ್ರು.