ಮುಂಬೈ: ಮಹಾರಾಷ್ಟ್ರದ 11 ಜಿಲ್ಲೆಗಳಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ದುರಂತದಲ್ಲಿ 23 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಮಹಾರಾಷ್ಟ್ರದ ಪುಣೆ, ಮುಂಬೈ, ಅಮರಾವತಿ, ನಾಗ್ಪುರ, ಥಾಣೆ, ನಾಸಿಕ್, ರತ್ನಗಿರಿ, ಸಿಂಧುದುರ್ಗ, ದೂಲೆ, ಅಹ್ಮದನಗರ, ಸಾತಾರ, ನಾಂದೇಡ ಹಾಗೂ ಅಕೋಲಾದಲ್ಲಿ ನಡೆದ ದುರಂತದಲ್ಲಿ 23 ಮಂದಿ ಜಲಸಮಾಧಿಯಾಗಿದ್ದಾರೆ.
ಇನ್ನು ಭೋಪಾಲ್ ನಲ್ಲಿ 11 ಮಂದಿ ಸಾವು. ದೆಹಲಿಯಲ್ಲಿ 4 ಸಾವು, ಉತ್ತರಪ್ರದೇಶದಲ್ಲಿ 2 ಸಾವು. ಹೀಗೆ ದೇಶದ ನಾನಾ ಭಾಗದಲ್ಲಿ ನಡೆದ ದುರಂತದಲ್ಲಿ 40 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ರಾಜ್ಯದಲ್ಲಿ 3 ಮಕ್ಕಳು ಸಾವನ್ನಪ್ಪಿದ್ದು ಕಣ್ಮುಂದೆ ಇದೆ. ಸಾವಿರಾರ ಸಂಖ್ಯೆಯಲ್ಲಿ ಜನ ಸೇರುವುದ್ರಿಂದ ವಿಸರ್ಜನೆ ವೇಳೆ ಅನಾಹುತ ನಡೆಯತ್ತಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಎಷ್ಟೇ ಮನವಿ ಮಾಡಿಕೊಂಡ್ರೂ ಕೇಳ್ತಿಲ್ಲ ಅನ್ನೋದು ಪೊಲೀಸರ ಮಾತು.