ಪ್ರಜಾಸ್ತ್ರ ಪಾಲಿ‘ಟ್ರಿಕ್ಸ್’
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯ್ತು. ಈ ವೇಳೆ ಮಾತ್ನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ಡಿಜೆ ಹಳ್ಳಿ ಪ್ರಕರಣದಲ್ಲಿ ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ. ಗಲಾಟೆ ಮಾಡಲು ಬಿಟ್ಟು ಇದೀಗ ಜಾತಿ ಬಣ್ಣ ಬಳೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ರು.
ಶಾಸಕ ಅಖಂಡ ಶ್ರೀನಿವಾಸ ಮೇಲೆ ಒತ್ತಡ ಹೇರಲಾಗ್ತಿದೆ. ನಮ್ಮ ಕಾರ್ಪೂರೇಟರ್ ಗಳಿಗೆ ನೋಟಿಸ್ ಕೊಟ್ಟು ಬ್ಲಾಕ್ ಮಾಡ್ತಿದ್ದಾರೆ. ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಗೆ ಅವರ ಕಾರ್ಯಕರ್ತ ಮಾಡಿದ ಪೋಸ್ಟ್ ಕಾರಣ ಎಂದು ಕಿಡಿ ಕಾರಿದ್ರು.
ಗಲಾಟೆ ವಿಚಾರದಲ್ಲಿ ಬಿಜೆಪಿ ಏನು ಮಾಡ್ತಿದೆ ಎಂದು ನಮಗೆ ಗೊತ್ತು. ಬೆದರಿಕೆ, ಒತ್ತಡಗಳನ್ನ ನಾವು ಸಹಿಸುವುದಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕಾಂಗ್ರೆಸ್ ಆಂತರಿಕ ತನಿಖೆ ಮಾಡಲಿದೆ. ಬಿಜೆಪಿ ಪೊಲೀಸರ ಮೂಲಕ ಕಾರ್ಪೂರೇಟರ್ ಗಳಿಗೆ ಬೆದರಿಕೆ ಹಾಕ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ರು.