‘ಕಾಂಗ್ರೆಸ್ ನಾಯಕರು ಸಂಪತರಾಜ ಪರವೋ.. ಅಖಂಡ ಶ್ರೀನಿವಾಸ ಪರವೋ’

282

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಘಟನೆ ಸೇರಿದಂತೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಅವರ ಮನೆ, ಕಚೇರಿಯನ್ನ ಸಹ ಧ್ವಂಸಗೊಳಿಸಲಾಗಿತ್ತು. ಹೀಗಾಗಿ ಇದು ಬಹುದೊಡ್ಡ ಚರ್ಚೆ ಆಯ್ತು. ಆರೋಪಿಗಳನ್ನ ಬಂಧಿಸ್ತಾ ಹೋದಂತೆ ರಾಜಕೀಯ ನಾಯಕರ ಹೆಸರು ಕೇಳಿ ಬಂತು. ಇದೀಗ ಬಿಬಿಎಂಪಿ ಮಾಜಿ ಮೇಯರ್ ಸಂಪತರಾಜ್ ಬಂಧನವಾಗಿದೆ.

ಈ ಬಗ್ಗೆ ಮಾತ್ನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಪತರಾಜ್ ಆರೋಪಿ. ಅಪರಾಧಿ ಅಲ್ಲವೆಂದು ಹೇಳುವ ಮೂಲಕ ಅವರ ಪರ ಬ್ಯಾಟ್ ಬೀಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ, ಕೈ ನಾಯಕರು ಅಖಂಡ ಶ್ರೀನಿವಾಸ ಪರವೋ ಸಂಪತರಾಜ್ ಪರವೋ ಎಂದು ಪ್ರಶ್ನಿಸಿದ್ದಾರೆ.

ದಲಿತ ಶಾಸಕನ ಮನೆ ಮೇಲೆ ದಾಳಿ ಮಾಡಿ ಹತ್ಯೆಗೆ ಯತ್ನಿಸಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಕಾಂಗ್ರೆಸ್ ನಾಯಕರು ಹೇಳ್ತಿಲ್ಲ. ದಲಿತರ ಬಗ್ಗೆ ಅವರಿಗೆ ಬರೋದು ಬರಿ ಮೊಸಳೆ ಕಣ್ಣೀರು ಎಂದು ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!