ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ ಕುರಿತು, ಕೊಡಗು-ಮೈಸೂರು ಸಂಸದ ಪ್ರತಾಪ ಸಿಂಹ ಆಡಿದ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪೇಟೆ ರೌಡಿ ಭಾಷೆಯಲ್ಲಿ ಮಾತ್ನಾಡಿದ್ರೆ ಪ್ರತಿಕ್ರಿಯೆಗೆ ಅರ್ಹವಾದ ಹೇಳಿಕೆಯಲ್ಲ ಎಂದು ಹೇಳಿದ್ದಾರೆ.
ಕೆ.ಆರ್ ಪೇಟೆ ನನ್ನ ವ್ಯಾಪ್ತಿಗೆ ಬರುತ್ತೆ. ಮೈಸೂರು ಲೋಕಸಭಾ ಕ್ಷೇತ್ರಕ್ಕೆ ನಾನೂ ಸಹ ಸೇರುತ್ತೇನೆ. ಕೊಡಗು ಜಿಲ್ಲೆಯಲ್ಲಿ ನೆರೆ ಬಂದು ಜನ ಜೀವನ ಅಸ್ತವ್ಯಸ್ತವಾಗಿವೆ. ಅಲ್ಲಿನ ಜನರು ನನ್ನ ಬಳಿ ಬಂದು ಸಮಸ್ಯೆ ಹೇಳ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಬೇಜವಾಬ್ದಾರಿಯುತವಾಗಿ ಮಾತ್ನಾಡಬಾರದು ಎಂದಿದ್ದಾರೆ.
ಅಂಬರೀಶ ಇದ್ದಾಗ ಯಾರೂ ಮಾತ್ನಾಡ್ತಿರ್ಲಿಲ್ಲ. ಪ್ರತಾಪ ಸಿಂಹ ಹಾಗೂ ಪಕ್ಕದ ಕ್ಷೇತ್ರದ ಜನಪ್ರತಿನಿಧಿಗಳಿಗೆ ನಾನು ಉತ್ತರದಾಯಿ ಅಲ್ಲ. ನನ್ನ ಕೆಲಸದ ಬಗ್ಗೆ ಏನು ಪ್ರತಿಕ್ರಿಯೆ ಅನ್ನೋದೆ ಅಷ್ಟೇ ಮುಖ್ಯ.