ಪ್ರಜಾಸ್ತ್ರ ಸುದ್ದಿ
ಕೊಡಗು: ಭಾಗಮಂಡಲದ ಬ್ರಹ್ಮಗಿರಿ ಬೆಟ್ಟ ಕುಸಿತದಲ್ಲಿ ಸುಲಿಕಿದ ಐವರಲ್ಲಿ ಇಂದು ಮತ್ತೊಬ್ಬರ ಮೃತದೇಹ ಸಿಕ್ಕಿದೆ. ಈ ಮೂಲಕ ಮೂವರ ಮೃತದೇಹಗಳು ಪತ್ತೆಯಾಗಿವೆ. 10 ದಿನಗಳ ಬಳಿಕ ಇದೀಗ ಸಿಕ್ಕಿರುವ ಮೃತದೇಹ ಯಾರದೆಂದು ಪತ್ತೆಯಾಗದಷ್ಟು ಕೊಳೆತ ಸ್ಥಿತಿಯಲ್ಲಿದೆ ಎಂದು ಹೇಳಲಾಗ್ತಿದೆ.
ರವಿಕಿರಣ, ಶ್ರೀನಿವಾಸ ಹಾಗೂ ಶಾಂತಾ ಎಂಬುವರ ಪತ್ತೆ ಕಾರ್ಯ ನಡೆದಿತ್ತು. ಹೀಗಾಗಿ ಈ ಮೂವರಲ್ಲಿ ಇದು ಯಾರದೆಂದು ತಿಳಿದು ಬಂದಿಲ್ಲ. ಮತ್ತಿಬ್ಬರಿಗಾಗಿ ಶೋಧಕಾರ್ಯ ನಡೆದಿದೆ.