ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ಬಿಬಿಎಂಪಿ ಮಾಜಿ ಮೇಯರ್ ಸಂಪತರಾಜಗೆ ಆಶ್ರಯ ನೀಡಿದವನನ್ನ ಬಂಧಿಸಲಾಗಿದೆ. ಬಿಬಿಎಂಪಿ ಕಾಂಟ್ರಾಕ್ಟೆರ್ ರಿಯಾಜುದ್ದೀನ್ ಬಂಧಿತ ವ್ಯಕ್ತಿಯಾಗಿದ್ದಾನೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಪತರಾಜ್ ಎಸ್ಕೇಪ್ ಆಗಲು ಸಹಾಯ ಮಾಡಿದ್ದ. ಬಳಿಕ ತನ್ನದೆ ಕಾರಿನಲ್ಲಿ ಕರೆದುಕೊಂಡು ಹೋಗಿ ನಾಗರಹೊಳೆ ಫಾರ್ಮ್ ಹೌಸ್ ನಲ್ಲಿ ಬಿಟ್ಟಿದ್ದ. ಆರೋಪಿ ಸಹಾಯ ಮಾಡಿದ ರಿಯಾಜುದ್ದೀನ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸಿಸಿಬಿ ಪೊಲೀಸರು ಸಂಪತರಾಜ್ ಬಂಧನಕ್ಕಾಗಿ ತೀವ್ರ ಶೋಧ ನಡೆಸಿದ್ದಾರೆ.